Friday, August 23, 2019

ಆಪದ್ಭಾಂದವ ಶ್ರೀಕೃಷ್ಣ

ಇವತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಆದ ಕಾರಣ ಈ ಕಥೆ ನನ್ನ ಕಣ್ಣಿಗೆ ಬಿತ್ತು ..

ಪಾಂಡವರ ಹೆಂಡತಿ ದ್ರೌಪದಿ . ಅವಳಣ್ಣ ಶ್ರೀಕೃಷ್ಣ . ಒಂದು ಸಲ ಕೃಷ್ಣ ಪಾಂಡವರ ಜೊತೆ ಮಾತಾಡಲು ಬೆಳಗ್ಗೆಯೇ ಬಂದ . ಊಟ ದ ಹೊತ್ತಾಯಿತು . ದ್ರೌಪದಿ ಕೃಷ್ಣನನ್ನು
ಉಪಚರಿಸು ತ್ತಾಳೆ .


ಊಟಕ್ಕೆಂದು ಅನ್ನ ಮಾಡಲು ಹೋಗುತ್ತಾಳೆ . ನೀರು ಬಿಸಿಗೆ ಇಡುತ್ತಾಳೆ . ಎಷ್ಟು ಹೊತ್ತಾದರು ನೀರು ಬಿಸಿಯೇ ಆಗುವುದಿಲ್ಲ . ಕೃಷ್ಣ ಹೊರಗೆ ಕಾಯುತ್ತಿರುತ್ತಾರೆ .


ದ್ರೌಪದಿಗೆ ತಲೆ ಬಿಸಿ ಆಗುತ್ತದೆ . ನೀರು ಬಿಸಿಯೇ ಆಗು ತ್ತಿಲ್ಲ . ದ್ರೌಪದಿ ಕೃಷ್ಣನ ಬಳಿ ಬಂದು ಈ ವಿಚಿತ್ರ ವಿದ್ಯಮಾನವನ್ನು ತಿಳಿಸುತ್ತಾಳೆ .

ಆಗ ಕೃಷ್ಣ ನಕ್ಕು ಆ ನೀರನ್ನು ಬಾವಿಗೆ ಚೆಲ್ಲಿ ಹೊಸ ನೀರನ್ನು ಬಿಸಿಗಿಡಲು ಹೇಳುತ್ತಾನೆ . ದ್ರೌಪದಿ ಹಾಗೆ ಮಾಡಲು ನೀರು ಬಿಸಿ ಆಗುತ್ತದೆ . ಅನ್ನವೂ ತಯಾರಾಗುತ್ತದೆ .


ಚಕಿತ ದ್ರೌಪದಿ ಕಾರಣವನ್ನು ತಿಳಿಯ ಬಯಸಿದಾಗ ಕೃಷ್ಣ ಹೇಳುತ್ತಾನೆ ಮೊ ದಲು ಬಿಸಿಗಿಟ್ಟ ನೀರಿನಲ್ಲಿ ಸಣ್ಣ ಕಪ್ಪೆ ಮರಿ ಇತ್ತು . ನೀರು ಬಿಸಿಯಾಗುವಾಗ ಅದು ಪ್ರಾಣಭಯದಿಂದ ನನ್ನ ನಾಮ ಸ್ಮರಣೆ ಮಾಡುತಿತ್ತು . ಹಾಗಾಗಿ ಅದನ್ನು ರಕ್ಷಿಸಲು ನಾನು ನೀರು ಬಿಸಿ ಆಗದ ಹಾಗೆ ನೋಡಿಕೊಂಡೆ ಎಂದ .




No comments:

Post a Comment