Monday, September 14, 2020

ಪೌಂಡ್ರಕ , ಡುಪ್ಲಿಕೇಟ್ ಶ್ರೀಕೃಷ್ಣ

ಈ ಜಗತ್ತಿನಲ್ಲಿ ಒಬ್ಬರ  ಹಾಗೆ ೭ ಜನ ಇರುತ್ತಾರಂತೆ . ಮಹಾಭಾರತದ ಕಾಲದಲ್ಲೂ ಶ್ರೀಕೃಷ್ಣನ ಡುಪ್ಲಿಕೇಟ್ ಒಬ್ಬ ಇದ್ದನಂತೆ . ಅವನೇ ಪೌಂಡ್ರಕ .

ಅವನು ಪೌಂಡ್ರ ದೇಶದ ರಾಜ .  ಅವನು    ತನ್ನನ್ನು ತಾನೇ ಪೌಂಡ್ರಕ ವಾಸುದೇವ ಎಂದು ಕರೆದು ಕೊಳ್ಳುತ್ತಿದ್ದ . ಇದಕ್ಕೆ ಸರಿಯಾಗಿ ಅವನ ಆಸ್ಥಾನದ ಜನರೂ ಆತನೇ ನಿಜವಾದ ಶ್ರೀಕೃಷ್ಣ ಎಂದು ಆತನನ್ನು ಹೊಗಳುತ್ತಿದ್ದರು .


ಇದರಿಂದ ಉಬ್ಬಿ ಹೋದ ಆತ ತಾನೇ ನಿಜವಾದ ಶ್ರೀಕೃಷ್ಣ ಎಂದೂ ಹಾಗೂ ಜನರು ತನ್ನನ್ನೇ ಪೂಜಿಸಬೇಕೆಂದು ಆಜ್ಞಾಪಿಸುತ್ತಾನೆ .



ತನ್ನ ಮೈ ಗೆ ನೀಲಿ ಬಣ್ಣವನ್ನು ಹಚ್ಚಿಕೊಂಡು ಹಾಗೂ ಎರಡು ಮರದ ಕೈ ಮಾಡಿಸಿಕೊಂಡು ದೇವರಂತೆ ಅಭಿನಯಿಸಿ ಜನರನ್ನು ಮೂರ್ಖ ಮಾಡುತ್ತಿದ್ದ . ಆತ ಪೌಂಡ್ರ ದೇಶದ ರಾಜನಾಗಿದ್ದ .


ಅವನು ಜರಾಸಂಧ ನ ಮಿತ್ರನಾಗಿದ್ದ . ಶ್ರೀ ಕೃಷ್ಣ ನಿಗೆ ದೂತರನ್ನು ಕಳುಹಿಸಿ ತಾನೇ ನಿಜವಾದ ಶ್ರೀಕೃಷ್ಣ ಎಂದು ಒಕ್ಕಣೆ ಕಳುಹಿಸಿದ .


ಇದನ್ನು ಗಮನಿಸಿದ ನಿಜವಾದ ಶ್ರೀಕೃಷ್ಣ ಯುದ್ಧದಲ್ಲಿ ಡುಪ್ಲಿಕೇಟ್ ಶ್ರೀಕೃಷ್ಣ ನನ್ನು ಸಂಹರಿಸುತ್ತಾನೆ .


No comments:

Post a Comment