Saturday, November 27, 2010

ಚಾಮುಂಡಿಯ ಹುಟ್ಟು

                                                                      ಚಾಮುಂಡಿಯ ಹುಟ್ಟು
ಒಮ್ಮೆ ದೇವತೆಗಳಿಗೂ,ದಾನವರಿಗೂ ಭೀಕರ ಯುದ್ಧವಾಗಿ ದೇವತೆಗಳಿಗೆ ಸೋಲಾಯಿತು.ದಾನವರು ವಿಜಯಿಗಳಾಗಿ ದೇವತೆಗಳ ಎಲ್ಲ ಕೆಲಸವನ್ನು ತಾವೇ ಮಾಡಲು ಪ್ರಾರಂಭಿಸಿದರು.ಯಜ್ಯ-ಯಾಗಾದಿಗಳಲ್ಲಿ ಹವಿಸ್ಸನ್ನು ತಾವೇ ತೆಗೆದುಕೊಳ್ಳಲು ಪ್ರಾರಂಭಿಸಿದರು.ಮತ್ತು ದೇವತೆಗಳ ವಾಹನಗಳನ್ನು ಮತ್ತು ಅಷ್ಟ ದಿಕ್ಪಾಲಕರ ಕೆಲಸವನ್ನು ಕಸಿದುಕೊಂಡು,ದೇವತೆಗಳನ್ನು ಸ್ವರ್ಗದಿಂದ ಓಡಿಸಿದರು.
ಇದರಿಂದ ಚಿಂತಿತರಾದ ದೇವತೆಗಳು ಜಾಹ್ನವಿ ನದಿ ತೀರದಲ್ಲಿ ಕುಳಿತು ವಿಷ್ಣುವನ್ನು ಸ್ತುತಿಸಲಾರಂಭಿಸಿದರು. ಆಗ ಸ್ನಾನಕ್ಕೆಂದು ನದಿಗೆ ತೆರಳುತ್ತಿದ್ದ ಪಾರ್ವತಿಯು ಇವರನ್ನು ಗಮನಿಸಿದಳು.ಅವರ ಬಳಿ ಬಂದು ವಿಷಯವೇನೆಂದು ವಿಚಾರಿಸಿದಾಗ ದೇವತೆಗಳು ತಮ್ಮ ಕಷ್ಟವನ್ನು ವಿವರಿಸಿದರು.ಇದರಿಂದ ಕೋಪಗೊಂಡ ಪಾರ್ವತಿಯ ದೇಹದಿಂದ "ಕಾಳಿ"ಯು ಉದ್ಭವಿಸಿದಳು.ಆ ಕಾಳಿಯು ಕಪ್ಪನೆಯ ಶರೀರವನ್ನು ಹೊಂದಿದ್ದು ನೋಡಲು ಭಯಂಕರ ಆಗಿದ್ದಳು.
ಪಾರ್ವತಿಯು ಕಾಳಿಯ ಬಳಿ ಆಕೆಯ ಜನ್ಮ ರಹಸ್ಯವನ್ನು ತಿಳಿಸಿದಾಗ ಕಾಳಿಯು ದಾನವರನ್ನು ಕೊಲ್ಲಲು ಹೊರಟಳು.ಆಗ ಪಾರ್ವತಿಯು ದಾನವರೇ ನಮ್ಮ ಹತ್ತಿರ ಬರುವಂತೆ ಮಾಡಲು ಉಪಾಯವನ್ನು ಯೋಚಿಸಿದಳು.ಆಗ ದಾನವರ ಅಧಿಪತಿಯಾಗಿದ್ದವರು ಚಂಡ-ಮುಂಡ ಎಂಬ ರಾಕ್ಷಸರು.ಕಾಳಿಯು  ಸುಂದರ ರೂಪವನ್ನು ಧರಿಸಿ ಅತ್ತಿತ್ತ ಓಡಾಡುತಿದ್ದಳು.ಇದು ಆ ರಾಕ್ಷಸರ ಕಿವಿಗೆ ಬಿಟ್ಟು ಮತ್ತು ಅವರು ಆಕೆಯ ಬಳಿಗೆ ತಮ್ಮ ದೂತನನ್ನು ತಮ್ಮ ಪರವಾಗಿ ಮಾತನಾಡಲು ಕಳುಹಿಸಿದರು.
ದೂತನು ಕಾಳಿಯ ಬಳಿ ಬಂದು ವಿಷಯವನ್ನು ತಿಳಿಸಿದಾಗ ಕಾಳಿಯು "ನನ್ನ ಜೊತೆ ಯುಧ್ಧ ಮಾಡಿ ಯಾರು ವಿಜಯಿಗಳಗುವರೋ ,ಅವರನ್ನೇ ತಾನು ಮದುವೆಯಾಗಲು ಇಚ್ಚಿಸಿದುವಾಗಿ ತಿಳಿಸಿದಳು.ಇದನ್ನು ದೂತನು ಚಂಡ-ಮುಂಡ ರಾಕ್ಷಸರಿಗೆ ತಲುಪಿಸಿದನು.ತಮ್ಮ ಬಲ-ಪರಾಕ್ರಮಲಿಂದ ದೇವತೆಗಳನ್ನು ಸೋಲಿಸಿ ಮದೊನ್ಮತ್ತರಾಗಿದ್ದ ಚಂಡ-ಮುಂಡ ರು ಅದಕ್ಕೆ ಸಂತೋಷದಿಂದಲೇ ಒಪ್ಪಿದರು.
ಚಂಡ-ಮುಂದರು ಮೊದಲು ಕಾಳಿಯ ಬಳಿ ಧೂಮ್ರ ಲೋಚನ ಎಂಬ ತಮ್ಮ ಬಂಟನನ್ನು ಸೈನ್ಯದ ಸಹಿತ ಕಳುಹಿಸಿದರು.ಆದರೆ ಕಾಳಿಯು ಹೂಂಕಾರ ಮಾತ್ರದಿಂದ ಆತನನ್ನು ವಧಿಸಿದಳು ಮತ್ತು ಆತ ಕರೆ ತಂದಿದ್ದ ಸೈನ್ಯ ದಿಕ್ಕಾಪಾಲಾಗಿ ಚದುರಿತು.
ಇದನ್ನು ತಿಳಿದ ಚಂಡ=ಮುಂಡರು ತಾವೇ ಯುಧ್ಧಕ್ಕೆ ಹೊರಟರು.ಇದನ್ನು ಮೊದಲೇ ಊಹಿಸಿದ್ದ ಕಾಳಿಯು ತನ್ನ ನೈಜ ರೂಪದಲ್ಲಿ ಯುದ್ಧಕ್ಕೆ ಸಿದ್ಧವಾಗಿದ್ದಳು.ರಾಕ್ಷಸರು ಬಂದ ಕೂಡಲೇ ಅವರ ಮೇಲೆ ಬಾಣಗಳ ಮಳೆಯನ್ನೇ ಸುರಿಸಿದಳು.ಘೋರ ಕದನ ನಡೆಯಿತು.ಕೊನೆಗೆ ಕಾಳಿಯು ಅವರೀರ್ವರ ತಲೆಯನ್ನು ಕತ್ತರಿಸಿ ಒಂದೊಂದು ಕೈಯಲ್ಲಿ ಹಿಡಿದುಕೊಂಡು ಪಾರ್ವತಿಯ ಬಳಿ ಬಂದಳು.
ಚಂಡ-ಮುಂಡರು ಹತರಾಗಿರುವುದನ್ನು ಕಂಡು ದೇವತೆಗಳು ಕಾಳಿಯನ್ನು ಸ್ತುತಿಸಿದರು. ಆಗ ಪಾರ್ವತಿಯು ಕಾಳಿಯ ಬಳಿ ಬಂದು ಚಂಡ-ಮುಂಡರ ಸಾವಿಗೆ ಕಾರಣಳಾದ ಕಾಳಿಯು ಇನ್ನು ಮುಂದೆ "ಚಾಮುಂಡಿ" ಎಂದು ಪ್ರಸಿದ್ಧಳಾಗುವಂತೆ ಹರಸಿದಳು.

1 comment: