Friday, November 26, 2010

ಮಧು-ಕೈಟಭ ವಧೆ

                                                        ಮಧು-ಕೈಟಭ ವಧೆ
ಒಮ್ಮೆ ಜಗತ್ತಿನಲ್ಲಿ ಪ್ರಳಯವಾಗಿ ಎಲ್ಲ ಮುಳುಗಿತು.ಸಕಲ ಜೀವರಾಶಿಗಳೂ ಅಳಿದು ಹೋದವು.ಈಗ
ಮತ್ತೊಮ್ಮೆ ಸೃಷ್ಟಿ ಕ್ರಿಯೆ ನಡಿಬೇಕು.ಅಗ ಭಗವಾನ್ ವಿಷ್ಣು ಯೋಗನಿದ್ರೆಗೆ ಜಾರಿದ.ಆದರೆ ಆತನ
ನಾಭಿಯಿಂದ ಹುಟ್ಟಿದ ಬ್ರಹ್ಮನು ಸೃಷ್ಟಿ ಕ್ರಿಯೆಯಲ್ಲಿ ತೊಡಗಿದ್ದ.
ಆಗ ನಿದ್ರೆಗೆ ಜಾರಿದ್ದ ವಿಷ್ಣುವಿನ ಕಿವಿಯಿಂದ ಮಧು-ಕೈಟಭ ಎಂಬ ಘೋರ ರಾಕ್ಷಸರ ಜನನವಾಯಿತು.ಆ ರಾಕ್ಷಸರು ಸೃಷ್ಟಿಕ್ರಿಯೆಯಲ್ಲಿ ತೊಡಗಿದ್ದ ಬ್ರಹ್ಮನನ್ನು ಕೊಲ್ಲಲು ಹವಣಿಸಿದರು.ಆದರೆ ವಿಷ್ಣುವು ಇನ್ನೂ ಯೋಗ ನಿದ್ರೆಯಿಂದ ಎಚ್ಚೆತ್ತಿಲ್ಲ.ಇದರಿಂದ ಚಿಂತಿತನಾದ ಬ್ರಹ್ಮನು ವಿಷ್ಣುವಿನ ಯೋಗನಿದ್ರೆಗೆ ಕಾರಣಳಾದ ಯೋಗಮಾಯೆಯನ್ನು ಸ್ತುತಿಸಿದನು.
ಇದರಿಂದ ಸಂಪ್ರೀತಳಾದ ಯೋಗಮಾಯೆ ವಿಷ್ಣುವಿನ ದೇಹದಿಂದ ಹೊರ ಬಂದಳು. ಮತ್ತು ಆಕೆ ಮಧು-ಕೈಟಭ ರಾಕ್ಷಸರ ದೇಹವನ್ನು ಹೊಕ್ಕಳು. ವಿಷ್ಣುವು ನಿದ್ರೆಯಿಂದ ಎಚ್ಚೆತ್ತು ನೋಡಲು ಮಧು-ಕೈಟಭರು ಬ್ರಹ್ಮನನ್ನೇ ಕೊಲ್ಲಲು ಹೊರಟಿರುವುದನ್ನು ಕಂಡನು.ಕೂಡಲೇ ಅವರ ಜೊತೆ ಯುಧ್ಧವನ್ನು ಪ್ರಾರಂಭಿಸಿದನು.
ಯುಧ್ಧ ಸುಮಾರು ೫,೦೦೦ ವರುಷಗಳ ತನಕ ನಡೆಯಿತು.ಆದರೆ ರಾಕ್ಷಸರು ಮಣಿಯುವ ಸೂಚನೆ ಕಾಣುತ್ತಿಲ್ಲ.ಆಗ ಯೋಗಮಾಯೆ ಮತ್ತೆ ರಾಕ್ಷಸರು ವಿಷ್ಣುವಿನಲ್ಲಿ ಮೋಹ ಗೊಳ್ಳುವಂತೆ ಮಾಡಿದಳು. ಆಗ ಆ ರಾಕ್ಷಸರು ವಿಷ್ಣುವಿಗೆ ತಾವು ಅವನಲ್ಲಿ ಪ್ರೀತಿಯಿಂದಿರಲು ಬಯಸುವುದಾಗಿ ಮತ್ತು ವರವನ್ನು ಕೇಳಲು ತಿಳಿಸಿದರು. ಆಗ ವಿಷ್ಣುವು ಅವರೀರ್ವರೂ ಈಗಲೇ ತನ್ನಿದ ಹತರಾಗಬೇಕೆಂದು ತಿಳಿಸಿದನು.ಮಾಯೆಗೆ ಒಳಗಾಗಿದ್ದ ರಾಕ್ಷಸರು ಅದಕ್ಕೆ ಒಪ್ಪಿದರು.ಆಗ ವಿಷ್ಣುವು ಅವರೀರ್ವರನ್ನೂ ಸಂಹರಿಸಿದನು.
ಹೀಗೆ ವಿಷ್ಣುವಿಗೆ "ಮಧುಸೂದನ" ಎಂಬ ಹೆಸರು ಬಂತು.

No comments:

Post a Comment