Sunday, October 27, 2019

ಮಳೆ ನಿಂತು ಹೋದ ಮೇಲೆ ......

ನಾನಿರುವ ಊರು ಕರ್ನಾಟಕದ ಕರಾವಳಿಯ ಉಡುಪಿ . ಎಲ್ಲರೂ ತಿಳಿದಿರುವಂತೆ ಕೇನ್ ಚಂಡಮಾರುತದ ಆರ್ಭಟ ಇಲ್ಲಿ ಸ್ವಲ್ಪ ಜೋರಾಗಿಯೇ ಇತ್ತು .


ಯಾವತ್ತೂ ಈ ಸಮಯದಲ್ಲಿ ಮಳೆ ಬಿಡುವು ಕೊಡುತ್ತದೆ . ಆದರೆ ಈ ಸಲ ಮಳೆಗಾಲವನ್ನು ನೆನಪಿಸುವ ಮಳೆ ಕಾಣಸಿಕ್ಕಿತು .


ನನ್ನ ಊರಿನಲ್ಲಿ ಇರುವುದು ಎರಡೇ ಕಾಲ . ಒಂದು ಮಳೆಗಾಲ , ಇನ್ನೊಂದು ಬೇಸಿಗೆ ಕಾಲ . ಆದರೆ ಚಂಡಮಾರುತದ ಪ್ರಭಾವದಿಂದ ಇಡೀ ದಿನ ಚುಮು ಚುಮು ಚಳಿಯ ಅನುಭವ ಆಯಿತು .


ನಾನು ಪ್ರತಿದಿನ ಯಾವಾಗಲೂ ತಣ್ಣೀರಿನಲ್ಲಿ ಸ್ನಾನ ಮಾಡುವುದು . ಇಷ್ಟಾದರೂ ಬರಿಯ ೫ ನಿಮಿಷದಲ್ಲಿ ಬೆವರು ಒಸರಲು ಶುರು .


ಆದರೆ ಈ ಸಲ ಹಾಗಾಗಲಿಲ್ಲ . ಚಳಿಯ ಅನುಭವ ಚೆನ್ನಾಗಿಯೇ ಆಯಿತು . ರಾತ್ರಿ ವೇಳೆ ಮಲಗುವಾಗ ಯಾವ ಮೇಲು ಹೊದಿಕೆಯನ್ನು ಹೊದ್ದುಕೊಳ್ಳದ ನಾನು ಕಳೆದ ಎರಡು ದಿನಗಳಿಂದ ಕಂಬಳಿ ಹೊದ್ದುಕೊಳ್ಳುತ್ತಿದ್ದೇನೆ .


ಆದರೆ ಇನ್ನು ಇವುಗಳ ಅಗತ್ಯ ನಮಗಿಲ್ಲ.  ಏಕೆಂದರೆ ಚಂಡಮಾರುತವು ಓಮನ್ ದೇಶದ ಕಡೆ ಹೋಗಿದೆ  . ಇಲ್ಲಿ ಮತ್ತೆ ಬಿಸಿಲಿನ ಝಳ ಶುರುವಾಗಿದೆ .


ಮಳೆ ನಿಂತು ಹೋದ ಮೇಲೆ ಸೆಖೆಯು ಶುರುವಾಗಿದೆ ......

No comments:

Post a Comment