Saturday, January 1, 2011

ಗಜಾಸುರ ವಧೆ

                                            ಗಜಾಸುರ ವಧೆ
ಹಿಂದೆ ದೇವತೆಗಳಿಗೂ ಮತ್ತು ದಾನವರಿಗೂ ಯುದ್ಧ ಆಗುತ್ತಿತ್ತು.ಆಗ ನೀಲ ಎನ್ನುವ ರಾಕ್ಷಸ ದೇವತೆಗಳನ್ನು ಸೋಲಿಸಲು ಅವರ ರಕ್ಷಕನಾದ ಶಿವನನ್ನೇ ಮೊದಲು ಸೋಲಿಸಬೇಕು ಎಂದು ಯೋಚಿಸಿ ರಾಕ್ಷಸ ನೀಲನು ಒಂದು ಆನೆಯ ದೇಹದ ಒಳಹೊಕ್ಕು ನಂತರ ಶಿವನ ಮೇಲೆ ಆಕ್ರಮಣ ಮಾಡುತ್ತಾನೆ.
ಆದರೆ ಶಿವನಿಗೆ ಇದು ಓರ್ವ ರಾಕ್ಷಸನ ಕೃತ್ಯ ಎಂದು ತಿಳಿಯುತ್ತದೆ. ಪಾಪದ ಪ್ರಾಣಿ ಆನೆಯನ್ನು ಘಾಸಿಗೊಳಿಸಲು ಇಚ್ಛಿಸದ ಶಿವನು ತಾನು ಕೂಡ ಅಣು ರೂಪದಲ್ಲಿ ಆನೆಯ ದೇಹದ ಒಳಹೋಗುತ್ತಾನೆ.ಅಲ್ಲಿ ತಾಂಡವ ನೃತ್ಯ ಮಾಡಿ ಆ ಗಜಾಸುರನನ್ನು ಕೊಲ್ಲುತ್ತಾನೆ.ಆನೆಗೆ ಏನೂ ಅಪಾಯ ಉಂಟಾಗುವುದಿಲ್ಲ.ಹೀಗಾಗಿ ಶಿವನಿಗೆ ಗಜಾಸುರಸೂದನ ಎಂಬ ಹೆಸರು ಬಂತು.

No comments:

Post a Comment