Friday, January 14, 2011

ಸ್ವಾತಂತ್ರ್ಯ ಸಂಗ್ರಾಮದ ಕಥೆ

                              ಸ್ವಾತಂತ್ರ್ಯ ಸಂಗ್ರಾಮದ ಕಥೆ
ಇದು ಸ್ವಾತಂತ್ರ್ಯ ಸಂಗ್ರಾಮ ಮೇರು ಘಟ್ಟದಲ್ಲಿದ್ದಾಗ ನಡೆದ ಘಟನೆ.ಬ್ರಿಟಿಶ್ ಸರ್ಕಾರ ಸ್ವಾತಂತ್ರ್ಯ ಹೋರಾಟಗಾರರನ್ನು ಹಿಡಿದು ಜೈಲಿಗೆ ಅಟ್ಟುತಿತ್ತು.ಆಗ ಓರ್ವ ಕೈದಿ ಸೆರೆಮನೆಯ ಆವರಣದಲ್ಲಿ ಪೋಲೀಸರೊಡನೆ ಬರುತ್ತಿರುತ್ತಾನೆ.ಆತನಿಗೆ ಎದೆಗೆ ,ಕೈಗೆ,ಕಾಲಿಗೆ ಎಲ್ಲ ಭಾರವಾದ ಕಬ್ಬಿಣದ ಗುಂಡುಗಳಿಂದ ಬಂಧಿಸಿರುತ್ತಾರೆ.ಅದು ಎಷ್ಟು ಭಾರವಾಗಿರುತ್ತದೆ ಎಂದರೆ ಕಾಲು ಎತ್ತಿ ಇಡುವಾಗಲೆಲ್ಲ ಭಾರಕ್ಕೆ ಚರ್ಮವೂ ಕಿತ್ತು ಬರುತ್ತಿರುತ್ತದೆ.
ಬ್ರಿಟಿಷರು ಇಂತಹ ಅಮಾನವೀಯ ಶಿಕ್ಷೆ ನೀಡಲು ಕಾರಣ ಕೈದಿ ಬ್ರಿಟಿಶ್ ಜೈಲರಿನ ಕಣ್ಣಲ್ಲಿ ಕಣ್ಣು ಇಟ್ಟು ಮಾತಾಡಿದ್ದು.ನಿಯಮದ ಪ್ರಕಾರ ಭಾರತೀಯರು ಬ್ರಿಟಿಷರ ಮುಂದೆ ತಲೆ ಬಗ್ಗಿಸಿಯೇ ಮಾತನಾಡಬೇಕು.ಕಣ್ಣಿನಲ್ಲಿ ಕಣ್ಣು ಇಟ್ಟು ಮಾತನಾಡಬಾರದು.ಆದರೆ ಕೈದಿ ಆ ಅಚಾತುರ್ಯವನ್ನು ಮಾಡಿದ ಕಾರಣ ಆತನಿಗೆ ಆ ಶಿಕ್ಷೆ. ಆದರೆ ಆತ ಪ್ರತಿ ಸಲ ಕಾಲು ಎತ್ತಿ ಇಡುವಾಗಲೂ ವಂದೇ ಮಾತರಂ ಎಂದೇ ಹೇಳುತ್ತಿದ್ದ.
ಆ ಜೈಲಿನಲ್ಲಿ ಓರ್ವ ಸನ್ಯಾಸಿಯೂ ಬಂಧಿಯಾಗಿದ್ದರು.ಕೈದಿ ಅವರನ್ನು ಕಂಡು ನಮಸ್ಕರಿಸಿ ತಾನು ಮಾಡಿದ್ದು ತಪ್ಪೇ? ಎಂದು ಕೇಳಿದ. ಆಗ ಆ ಸನ್ಯಾಸಿ ಭಾರತೀಯರೆಲ್ಲರೂ ಇದೇ ತರಹ ಬ್ರಿಟಿಷರ ಕಣ್ಣಿನಲ್ಲಿ ಕಣ್ಣು ಇಟ್ಟು ಮಾತನಾಡಿದರೆ ಅವರು ದೇಶ ಬಿಟ್ಟು ಹೋಗುವ ದಿನಾ ದೂರ ಇಲ್ಲ.ನೀನು ಮಾಡಿದ್ದು ಸರಿಯಾಗಿದೆ ಎಂದು ಆ ಕೈದಿಯನ್ನು ಹುರಿದುಂಬಿಸಿದರು.

No comments:

Post a Comment