Saturday, January 8, 2011

ತಿರುಗುಬಾಣ

                                           ತಿರುಗುಬಾಣ
ಮಿಥುನ್ ಮತ್ತೆ ಆಸ್ಪತ್ರೆಗೆ ಸೇರಿದ್ದಾನೆ.ವೈದ್ಯರ ಪ್ರಕಾರ ಇದು foodpoisening  ಕೇಸ್.ಮಿಥುನ್ ಪದೇ ಪದೇ ಆಸ್ಪತ್ರೆಗೆ ದಾಖಲಾಗುತ್ತಿರುತ್ತಾನೆ ಇದೆ ಕಾರಣದಿಂದ.ಆದರೆ ಪ್ರತಿ ಸಲ ಆತನ ಗೆಳೆಯ ರಾಜೇಶ್ ಆತನನ್ನು ಸರಿಯಾದ ಸಮಯದಲ್ಲಿ ಆಸ್ಪತ್ರೆಗೆ ದಾಖಲು ಮಾಡುತ್ತಿರುತ್ತಾನೆ.ಮಿಥುನಿನ ಹೆಂಡತಿ  ಅಚಲ ಆತನ ಪಕ್ಕದಲ್ಲೇ ಇದ್ದಾಳೆ.ಆಕೆ ಪ್ರತಿ ಬಾರಿ ಮಿಥುನ್ ಆಸ್ಪತ್ರೆಗೆ ಸೇರಿದಾಗಲೂ ಚಿಂತೆಗೆ ಒಳಗಾಗುತ್ತಾಳೆ.ಆದರೆ ರಾಜೇಶನಿಗೆ ಆಚಲಾಳ ಮೇಲೆಯೇ ಸಂಶಯ.ಆಕೆಯೇ ಮಿಥುನ್ ನಿನ ಆಹಾರದಲ್ಲಿ ವಿಷ ಬೆರೆಸುತ್ತಿದ್ದಾ ಳೆಂದು ಅವನ ಗುಮಾನಿ.
ಇದಕ್ಕಾಗಿ ಆತ ಪತ್ತೇದಾರ ರ ಸಹಾಯ ಯಾಚಿಸಲು ನಿರ್ಧರಿಸಿದ. ಪತ್ತೇದಾರ ವಿಜಯ್ ಮತ್ತು ಆತನ ಸಹಾಯಕಿ ನಿಶಾ ತಮ್ಮ ಕಚೇರಿಯಲ್ಲಿ ಕುಳಿತು ಮಾತನಾಡುತ್ತಿದ್ದಾರೆ.ಆಗ ರಾಜೇಶ್ ಒಳ ಬಂದ.ತನ್ನ ಅನುಮಾನವನ್ನು ಹೇಳಿಕೊಂಡ.ಆಗ ವಿಜಯಗೆ ರಾಜೇಶನ ಮೇಲೆ ಒಳ್ಳೆ ಅಭಿಪ್ರಾಯ ಬರುತ್ತದೆ.ಪ್ರತಿ ಸಲ ರಾಜೇಶ್ ಮಿಥುನಿನ ಸಹಾಯಕ್ಕೆ ಧಾವಿಸುತ್ತಿರುವುದು ವಿಜಯನಿಗೆ ಸಂತಸ ತರುತ್ತದೆ.ಆಗ ರಾಜೇಶ್ ಅಚಲ ಮನೆಯಲ್ಲೇ ಔತಣ ಕೂಟ ಏರ್ಪಡಿಸಿರುವುದನ್ನು ತಿಳಿಸುತ್ತಾನೆ..ವಿಜಯ್ ಮತ್ತು ನಿಶಾ ಅದಕ್ಕೆ ಹಾಜರಾಗಲು ನಿರ್ಣಯಿಸುತ್ತಾರೆ.
ಅಂತೆಯೇ ಅವರು ಔತಣ ಕೂಟಕ್ಕೆ ಹಾಜರಾಗುತ್ತಾರೆ.ಅದರಲ್ಲಿ ನಿಶಾ ಮಿಥುನ್ ಊಟ ಮಾಡುವ ತಟ್ಟೆಯನ್ನೇ ಬದಲಾಯಿಸುತ್ತಾಳೆ.ಮತ್ತು ಆ ತಟ್ಟೆಯಲ್ಲೇ ತಾನೂ ಉಣ್ಣುತ್ತಾಳೆ.ಆದರೆ ಇದರ ಬಗ್ಗೆ ಯಾರಿಗೂ ತಿಳಿಯುವುದಿಲ್ಲ.ಆದರೂ ಮಿಥುನ್ ಔತಣ ಕೂಟದ ನಂತರದ ೨ ದಿನಗಳಲ್ಲಿ  ಮತ್ತೆ ಆಸ್ಪತ್ರೆಗೆ ದಾಖಲಾಗುತ್ತಾನೆ.ಇದು ವಿಜಯ್ ನ ಅಚ್ಚರಿಗೆ ಕಾರಣವಾಗುತ್ತದೆ.ಒಂದು ವೇಳೆ ಆಹಾರದಲ್ಲಿ ವಿಷ ಬೆರೆತ್ತಿದ್ದರೆ ಔತಣ ಕೂಟದಲ್ಲಿ ಭಾಗಿಯಾಗಿದ್ದ ಉಳಿದ ಜನರು ಹೇಗೆ ಆರೋಗ್ಯವಂತರಾಗಿದ್ದಾರೆ?ಮತ್ತು ನಿಶಾ ಅದೇ ತಟ್ಟೆಯಲ್ಲೇ ಊಟ ಮಾಡಿದ್ದರೂ ಆಕೆಗೆ ಏನೂ ಆಗಿಲ್ಲ.ವಿಜಯನ ತಲೆ ಬಿಸಿ ಆಗುತ್ತದೆ.
ಹೀಗಿರುವಾಗಲೇ ವಿಜಯ್ ನ ಫೋನ್ ರಿಂಗುನಿಸುತ್ತದೆ.ಮತ್ತು ಅದರಲ್ಲಿ ರಾಜೇಶ್ ಮಾತನಾಡುತ್ತಿರುತ್ತಾನೆ. ಆತ ಆಚಲಾಳ ಸಾವಿನ ಸುದ್ದಿ ತಿಳಿಸಿ ಕೂಡಲೇ ಬರುವಂತೆ ತಿಳಿಸುತ್ತಾನೆ.ವಿಜಯ್ ಕೂಡಲೇ ಮಿಥುನಿನ ಮನೆಗೆ ತೆರಳುತ್ತಾನೆ.ಅಲ್ಲಿ ಮಿಥುನ್ ಒಂದು ಕಡೆ ಅನ್ಯಮನಸ್ಕನಾಗಿ ಕುಳಿತ್ತಿದ್ದ. ವಿಜಯ್ ಅವನ ಬಳಿ ಬಂದು ಸಾಂತ್ವಾನದ ಮಾತು ಹೇಳುತ್ತಾನೆ.ಆಗ ಮಿಥುನ್ ಹೇಳಿದ ಮಾತಿನಿಂದ ವಿಜಯ್ ಬೆಚ್ಚಿ ಬೀಳುತ್ತಾನೆ.
ಅದೇನೆಂದರೆ ಆಚಲಾಳ ಉಪಾಯ ಅವಳಿಗೆ ತಿರುಗುಬಾಣವಾದದ್ದು. ಯಾವತ್ತಿನಂತೆ ಅಚಲ ಮಿಥುನ್ ನನ್ನು ಊಟಕ್ಕೆ ಕರೆದಿದ್ದಾಳೆ.ಆದರೆ ಅಚಲ ಊಟ ತರುವುದಕ್ಕೆ ಸಾಕಷ್ಟು ಸಮಯ ತೆಗೆದುಕೊಂಡಿದ್ದಾಳೆ.ಇದರಿಂದ ಸಂಶಯಿತನಾದ ಮಿಥುನ್ ಆ ಊಟವನ್ನು ಅವಳಿಗೆ ತಿನ್ನಲು ನೀಡಿದಾಗ ಮೊದಲು ಆಕೆ ನಿರಾಕರಿಸುತ್ತಾಳೆ.ಆಮೇಲೆ ಗತ್ಯಂತರವಿಲ್ಲದೆ ಉಣ್ಣುತ್ತಾಳೆ.ಮತ್ತು ಸತ್ತು ಕೆಳಗೆ ಬೀಳುತ್ತಾಳೆ.ಇದನ್ನು ಮಿಥುನ್ ವಿಜಯಗೆ ತಿಳಿಸುತ್ತಾನೆ.
ಆದರೂ ವಿಜಯಗೆ ಏನೋ ಸಂಶಯ.ಆಚಲಾಳ ಸಾವು ಬೇರೆ ಕಾರಣದಿಂದ ಆಗಿದೆ ಎಂಬುದು ಆತನ ಶಂಕೆ.ಅದಕ್ಕಾಗಿ ಆತ ಮಿಥುನ್ ಮತ್ತು ರಾಕೇಶ್ ಇಬ್ಬರನ್ನೂ ತನ್ನ ಕಚೇರಿಗೆ ಬರ ಹೇಳುತ್ತಾನೆ.ಅಲ್ಲಿ ಅವರಿಗೆ ಕುಡಿಯಲು ನಿಶಾ ಪಾನೀಯ ತರುತ್ತಾಳೆ.ಆಗ ವಿಜಯ್ ಪಾನೀಯದಲ್ಲಿ ಸತ್ಯವನ್ನೇ ಹೇಳುವ ಪುಡಿ ಬೇರೆಸಿದ್ದಾಗಿ ತಿಳಿಸಿ ಅದನ್ನು ಕುಡಿಯಲು ಸೂಚಿಸುತ್ತಾನೆ.ಆಗ ಇಬ್ಬರೂ ಬೇರೆ ದಾರಿ ಕಾಣದೆ ಅದನ್ನು ಕುಡಿಯಲೇ ಬೇಕಾಗುತ್ತದೆ.
ಮೊದಲು ರಾಜೇಶ್ ಮಾತನಾಡಲು ಆರಂಭಿಸುತ್ತಾನೆ.ತಾನು ಆಚಲಾಳನ್ನು ಇಷ್ಟ  ಪಡುತ್ತಿದ್ದದನ್ನು ತಿಳಿಸುತ್ತಾನೆ.ಆದರೆ ತಾನು ಅವಳ ಕೊಲೆಗೆ ಕಾರಣನಲ್ಲ ಎಂದು ತಿಳಿಸುತ್ತಾನೆ.ಇದನೆಲ್ಲ ನೋಡುತ್ತಿದ್ದ ಮಿಥುನ್ ಗೆ ಹೆದರಿಕೆಯಾಗುತ್ತದೆ.ನಂತರ ಆತನೂ ಮಾತನಾಡಲು ಆರಂಭಿಸುತ್ತಾನೆ.ಮಿಥುನ್ ಹೇಳಿದ ಪ್ರಕಾರ ಆತನಿಗೆ ಇನ್ನೋರ್ವ ಹೆಂಗಸಿನ ಜೊತೆ ಸಂಬಂಧ ಇರುತ್ತದೆ.ಅದು ಅಚಲಾಳಿಗೆ ತಿಳಿಯುತ್ತದೆ.ಆದರೆ ಆಕೆ ವಿಚ್ಛೇದನ  ಕೊಡಲು ನಿರಾಕರಿಸುತ್ತಾಳೆ.
ಆಗ ಮಿಥುನ್ ತಲೆಯಲ್ಲಿ ಒಂದು ಉಪಾಯ ಹೊಳೆಯುತ್ತದೆ.ತಾನೇ ಅಲ್ಪ ಪ್ರಮಾಣದಲ್ಲಿ ವಿಷ ಸೇವಿಸಿ ತನ್ನ ಗೆಳೆಯ ರಾಜೇಶನಿಗೆ ಬರಹೇಳುತ್ತಾನೆ ಮತ್ತು ಆಸ್ಪತ್ರೆಗೆ ಧಾಖಲಾಗುತ್ತಾನೆ.ಇದರಿಂದ ಎಲ್ಲರೂ ಆಚಲಾಳನ್ನೇ ಸಂಶಯದ ದೃಷ್ಟಿಯಿಂದ ನೋಡುತ್ತಾರೆ.ಇದರ ಲಾಭ ಪಡೆದ ಮಿಥುನ್ ಕೊನೆಗೆ ಅವಳನ್ನೇ ಸಾಯಿಸುತ್ತಾನೆ.ತನ್ನ ಮೇಲೆ ಯಾರಿಗೂ ಸಂಶಯ ಬರದು ಎಂದು ತಿಳಿಯುತ್ತಾನೆ.ಇದನ್ನೆಲ್ಲಾ ತಿಳಿದ ರಾಜೇಶ್ ವಿಜಯ್ ನ ಬಳಿ ಬಂದು ಆತನ ಕೈ ಕುಲುಕುತ್ತಾನೆ.ಕೊನೆಗೂ ಪಾನೀಯದಲ್ಲಿ ಸತ್ಯ ಹೇಳುವ ಪುಡಿ ಬೆರೆಸಿದ್ದಾಗಿ ಹೇಳಿದ ತಮ್ಮ ನಾಟಕ ಯಶಸ್ವಿಯಾಗಿ ಆಚಲಾಳ ಸಾವಿನ ರಹಸ್ಯ ಬಯಲಾದದ್ದಕ್ಕೆ ಸಂತಸಗೊಳ್ಳುತ್ತಾರೆ

No comments:

Post a Comment