Friday, January 7, 2011

ಸಾಗರಕ್ಕೆ ಆ ಹೆಸರು ಬಂದ ಬಗೆ

                                     ಸಾಗರಕ್ಕೆ ಆ ಹೆಸರು ಬಂದ ಬಗೆ
ಬಹಳ ಹಿಂದೆ ಭಾರತ ದೇಶವನ್ನು ಸಗರ ಎನ್ನುವ ರಾಜ ಆಳುತ್ತಿದ್ದನು.ಆತ ಒಮ್ಮೆ ಒಂದು ದೊಡ್ಡ ಯಾಗ ಮಾಡಲು ಸಂಕಲ್ಪಿಸಿದನು.ಅದರಂತೆ ಆತ ಯಾಗ ಪಶುವಾದ ಕುದುರೆಯನ್ನು ಆಯ್ಕೆ ಮಾಡಿ ಅದನ್ನು ಹೊರಗೆ ತಿರುಗಲು ಬಿಟ್ಟನು.ಹಿಂದಿನ ಕಾಲದ ಪದ್ಧತಿಯಂತೆ ಯಾರಿಗೆ ರಾಜ ಮಾಡುವ ಯಾಗದಿಂದ ಅಸಮಾಧಾನವಿದೆಯೋ ಅಂಥವರು ಯಾಗ ಪಶುವನ್ನು ಕಟ್ಟಿ ಹಾಕುತ್ತಾರೆ.ಆಗ ರಾಜ ಬಂದು ಅವರ ಜೊತೆ ಮಾತನಾಡುತ್ತಾನೆ.
ಹೀಗಿರಲು ಸಾಗರನ ಯಾಗ ಪಶುವನ್ನು ಕೆಲವು ರಾಕ್ಷಸರು ಕೊಂಡೊಯ್ದು ಅದನ್ನು ಪಾತಾಳದಲ್ಲಿ ತಪಸ್ಸು ಮಾಡುತ್ತಿದ್ದ ಒಬ್ಬ ಮುನಿಯ ಆಶ್ರಮಕ್ಕೆ ತಂದು ಅಲ್ಲಿ ಅದನ್ನು ಕಟ್ಟಿ ಹಾಕುತ್ತಾರೆ.ಮುನಿಗೆ ಇದರ ಅರಿವೇ ಇರುವುದಿಲ್ಲ.ಯಾಗ ಪಶುವು ಎಷ್ಟೊತ್ತಾದರೂ ಹಿಂದಿರುಗದೆ  ಇರುವುದನ್ನು ಕಂಡ ರಾಜ ತನ್ನ ೧೦೦ ಜನ ಪುತ್ರರ ಬಳಿ ಅದನ್ನು ಹುಡುಕಿ ತರುವಂತೆ ತಿಳಿಸುತ್ತಾನೆ.ಅಂತೆಯೇ ಅವರು ಕುದುರೆಯನ್ನು ಹುಡುಕಿಕೊಂಡು ತೆರಳುತ್ತಾರೆ.
ಅವರು ಕೊನೆಗೆ ಪಾತಾಳ ಲೋಕಕ್ಕೆ ಹೋದಾಗ ಅಲ್ಲಿ ಒಬ್ಬ ಮುನಿಯ ಆಶ್ರಮದಲ್ಲಿ ಯಾಗ ಪಶುವನ್ನು ಕಟ್ಟಿ ಹಾಕಲಾಗಿರುವುದನ್ನು ಕಾಣುತ್ತಾರೆ. ಆ ಮುನಿಯೇ ತಮ್ಮ ಯಾಗ ಪಶುವನ್ನು ಕಟ್ಟಿ ಹಾಕಿರುವುದಾಗಿ ಊಹಿಸಿದ ಸಗರ ಪುತ್ರರು ಆ ಮುನಿಯನ್ನು ಕಟ್ಟಿ ತಮ್ಮೊಂದಿಗೆ ಕರೆದೊಯ್ಯುತ್ತಾರೆ.ಆಗ ತಪೋಭಂಗವಾದ ಮುನಿಯು ಕಣ್ಣು ಬಿಟ್ಟು ನೋಡಿದಾಗ ಸಗರ ಪುತ್ರರು ಸುಟ್ಟು ಬೂದಿಯಾಗುತ್ತಾರೆ.
ನಂತರ ಆ ಬೂದಿಯನ್ನು ಪಾತಾಳ ಲೋಕದಲ್ಲೇ ಇಡುತ್ತಾನೆ.
ನಂತರ ಸಗರನಿಗೆ ಈ ಸುದ್ದಿ ಗೊತ್ತಾಗುತ್ತದೆ.ಅವನು ಬಂದು ಆ ಬೂದಿಯನ್ನು ತಂದು ನೀರಿನಲ್ಲಿ ಕರಗಿಸುತ್ತಾನೆ.ಆತ ಕರಗಿಸಿದ ನೀರಿನ ಆಕರವೇ ಸಾಗರ ಎಂದು ಖ್ಯಾತಿ ಆಯಿತು.

No comments:

Post a Comment