Tuesday, January 4, 2011

ಭೈರವನ ಹುಟ್ಟು

                                    ಭೈರವನ ಹುಟ್ಟು
ಹಿಂದೆ ವಿಷ್ಣುವಿಗೂ ಮತ್ತು ಬ್ರಹ್ಮನಿಗೂ ಯಾರು ಜಗತ್ತಿನಲ್ಲಿ ಶ್ರೇಷ್ಠರು ಎಂದು ಜಗಳ ಪ್ರಾರಂಭವಾಯಿತು.ಆಗ ಸಿಟ್ಟಿನಲ್ಲಿ ಬ್ರಹ್ಮನು ವಿಷ್ಣುವಿಗೆ "ಎಲ್ಲರೂ ತನ್ನನ್ನೇ ಪೂಜಿಸುತ್ತಾರೆ.ಆದ್ದರಿಂದ ನಾನೇ ಶ್ರೇಷ್ಠ" ಎಂದು ಜಂಭ ಮಾಡಿದ.ಇದು ಶಿವನಿಗೆ ತಿಳಿದು ಅವನಿಗೆ ಬ್ರಹ್ಮನ ಮೇಲೆ ತುಂಬಾ ಸಿಟ್ಟು ಬಂತು.ಏಕೆಂದರೆ ಶಿವನೆ ನಿಜವಾಗಲೂ ಈ ಜಗತ್ತಿನ ಸೃಷ್ಟಿಕರ್ತ ನಾಗಿದ್ದಾನೆ.ಹೀಗಾಗಿ ಆತ ಬ್ರಹ್ಮನನ್ನು ಸಂಹರಿಸಲು ಹೊರಟ.
ಆಗ ಬ್ರಹ್ಮನಿಗೆ ೫ ತಲೆಗಳಿದ್ದವು.ಕೋಪೋದ್ರಿಕ್ತ ಶಿವ ಬ್ರಹ್ಮನ ೫ನೆ ತಲೆಯನ್ನು ಕತ್ತರಿಸಿ ಕೈಯಲ್ಲಿ ಇಟ್ಟುಕೊಂಡ.ಆಗ ಅವನಿಗೆ ಭೈರವ ಎಂಬ ಹೆಸರು ಬಂತು.ಇನ್ನೊಂದು  ಕಥೆಯ ಪ್ರಕಾರ ವಿಷ್ಣು ಮತ್ತು ಬ್ರಹ್ಮನ ಜಗಳದ ವಿಷಯವಾಗಿ ಶಿವನು ಸಿಟ್ಟುಗೊಂಡು ತನ್ನ ಹುಬ್ಬು(ಭ್ರೂ) ಗಳನ್ನೂ ಸಂಕುಚಿಸಿದ.ಆಗ ಆತನ ಕೋಪೋದ್ರಿಕ್ತ  ಅವತಾರವಾದ ಭೈರವನ ಜನನವಾಯಿತು.

No comments:

Post a Comment