Wednesday, February 2, 2011

ಹಾಲು ಮತ್ತು ಸಕ್ಕರೆ

                                      ಹಾಲು ಮತ್ತು ಸಕ್ಕರೆ
 ಪಾರ್ಸಿ ಜನಾಂಗದವರು  ಇಂದಿನ ಇರಾನ್ ದೇಶದವರು.ಆದರೆ ಅವರು ಅಗ್ನಿಯ ಉಪಾಸಕರು.ಹೀಗಿದ್ದಾಗ ಇರಾನ್ ಮೇಲೆ ಅರಬ್ಬರು ಆಕ್ರಮಣ ಮಾಡುತ್ತಾರೆ.ಅವರು ಬಲವಂತವಾಗಿ ಪಾರ್ಸಿಗಳನ್ನು ಮುಸಲ್ಮಾನ ಧರ್ಮಕ್ಕೆ ಮತಾಂತರ ಮಾಡಲು ಆರಂಭಿಸುತ್ತಾರೆ.ಇದರಿಂದ ಹೆದರಿದ ಪಾರ್ಸಿಗಳು ತಮ್ಮ ತಾಯ್ನಾಡನ್ನು ಬಿಟ್ಟು ಪ್ರಪಂಚದ ಎಲ್ಲೆಡೆಗೆ ಪಾಲಾಯನ ಮಾಡುತ್ತಾರೆ.ಅದರಲ್ಲಿ ಕೆಲವರು ಭಾರತಕ್ಕೂ ಬರುತ್ತಾರೆ.
ಅವರೆಲ್ಲ ಸೇರಿ ಒಬ್ಬ ರಾಜನ ಬಳಿ ತೆರಳಿ ತಮಗೆ ರಕ್ಷಣೆ ನೀಡುವಂತೆ ಹಾಗೂ ತಮ್ಮ ಆಚರಣೆಗಳನ್ನು ಮಾಡಲು ಅನುವಾಗುವಂತೆ ಮಾಡಲು ಸ್ವಾತಂತ್ರ್ಯ ನೀಡಲು ಮನವಿ ಮಾಡಿಕೊಳ್ಳುತ್ತಾರೆ.ಅದಕ್ಕೆಲ್ಲ ರಾಜನು ಒಪ್ಪಿದ.ಆದರೆ ಆತ ಇದರ ಬದಲಾಗಿ ತಮಗೆ ಏನು ಸಿಗುತ್ತದೆ ಎಂದು ಕೇಳಿದ.ಆಗ ಪಾರ್ಸಿಗಳ ಮುಖಂಡ ಒಂದು ಲೋಟೆ ಹಾಲು ಮತ್ತು ಒಂದು ಚಮಚ ಸಕ್ಕರೆ ನೀಡುವಂತೆ ವಿನಂತಿಸಿಕೊಳ್ಳುತ್ತಾನೆ.ರಾಜ ಅದನ್ನೆಲ್ಲವನ್ನು ನೀಡುತ್ತಾನೆ.
ಆಗ ಪಾರ್ಸಿಗಳ ಮುಖಂಡ ಸಕ್ಕರೆಯನ್ನು ಹಾಲಿನ ಲೋಟೆಯೊಳಗೆ ಹಾಕಿ ಕದಡುತ್ತಾನೆ.ಆಗ ಸಕ್ಕರೆ ಹಾಲಿನಲ್ಲಿ ಕರಗುತ್ತದೆ.ಆಗ ಮುಖಂಡ ರಾಜನ ಬಳಿ ಸಕ್ಕರೆಯನ್ನು ತೆಗೆದುಕೊಡುವಂತೆ ಕೇಳುತ್ತಾನೆ.ಆಗ ರಾಜ ಸಕ್ಕರೆ ಹಾಲಿನಲ್ಲಿ ಕರಗಿರುವುದಾಗಿ ಹೇಳುತ್ತಾನೆ.ಆಗ ಪಾರ್ಸಿಗಳ ಮುಖಂಡ ತಾವೂ ಭಾರತೀಯರ ಜೊತೆ ಹೀಗೆ ಹಾಲು-ಸಕ್ಕರೆಯಲ್ಲಿ ಬೆರೆತು ಹೋದ ಹಾಗೆ ಮತ್ತು ಅದರಿಂದ ಹಾಲಿನ ರುಚಿ ಹೆಚ್ಚಾಗಿರುವುದರ ಹಾಗೆ ತಾವೂ ಇರುವುದಾಗಿ ಭರವಸೆ  ನೀಡುತ್ತಾನೆ.

No comments:

Post a Comment