Saturday, February 26, 2011

ತೊಂದರೆ ನೀಡುವವರನ್ನು ಕಡೆಗಣಿಸಿ

                               ತೊಂದರೆ ನೀಡುವವರನ್ನು ಕಡೆಗಣಿಸಿ
ಒಮ್ಮೆ ಒಂದು ತಾಯಿ ತೆಂಗಿನ ಮರ ಎತ್ತರಕ್ಕೆ ಬೆಳೆದು ನಿಂತಿತ್ತು. ಅದರ ಹತ್ತಿರದಲ್ಲೇ ಅದರ ಮಗನಾದ ಮರಿ ತೆಂಗಿನ ಮರವೂ ಮೊಳಕೆಯೊಡೆದಿತ್ತು. ಆದರೆ ಮರಿ ತೆಂಗಿನ ಮರಕ್ಕೆ ಮುಂದೆ ಬೆಳೆಯಲು ಒಂದು ಮುಳ್ಳಿನ ಗಿಡ ಅಡ್ಡಿಯಾಗಿತ್ತು.ಅದು ಮರಿ ತೆಂಗಿನ ಮರಕ್ಕೆ ಬರಬೇಕಾದ ಸೂರ್ಯನ ಬೆಳಕಿಗೆ ತಡೆ ಆಗಿತ್ತು.ಮರಿ ತೆಂಗಿನ ಮರಕ್ಕೆ ಸಿಗಬೇಕಾದ ನೀರನ್ನು ತಾನೇ ಹೀರಿಕೊಳ್ಳುತಿತ್ತು.
ಇದರಿಂದ ರೋಸಿದ ಮರಿ ತೆಂಗಿನ ಮರ ಮುಳ್ಳಿನ ಗಿಡದ ಬಳಿ ತನಗೂ ಬೆಳೆಯಲು ಬಿಡುವಂತೆ ವಿನಂತಿಸಿಕೊಂಡಿತು.ಆದರೆ ಮುಳ್ಳಿನ ಗಿಡ ಹಟಮಾರಿಯಾಗಿತ್ತು.ಅದು ಮರಿ ತೆಂಗಿನ ಮರದ ಮಾತನ್ನು ಉಡಾಫೆ ಮಾಡಿತು.ಈಗ ಮರಿ ತೆಂಗಿನ ಮರ ತನ್ನ ತಾಯಿಯ ಬಳಿ ತನ್ನ ಸಮಸ್ಯೆಯನ್ನು ಹೇಳಿಕೊಂಡಿತು.ಮುಳ್ಳಿನ ಗಿಡ ತನ್ನ ಹಟವನ್ನು ಬಿಡದಿರುವುದನ್ನೂ ತಿಳಿಸಿತು.ಆಗ ತಾಯಿ ತೆಂಗಿನ ಮರ ತನ್ನ ಮಗನಿಗೆ ಹೇಳಿತು:
ನಿನಗೆ ಬೆಳೆಯಲು ಎಲ್ಲಾ ಅವಕಾಶವಿದೆ.ನೀನೂ ನನ್ನಂತೆ ಎತ್ತರವಾಗಿ ಬೆಳೆಯಬಲ್ಲೆ.ಆಗ ಈ ಮುಳ್ಳಿನ ಗಿಡ ನಿನ್ನ ಕಣ್ಣಿಗೆ ಕಾಣುವುದೂ ಇಲ್ಲ.ಈಗ ತೊಂದರೆ ಕೊಡುತ್ತಿರುವ ಮುಳ್ಳಿನ ಗಿಡವನ್ನು ಕಡೆಗಣಿಸಿ,ನಿನ್ನ ಬೆಳವಣಿಗೆಯ ಕಡೆಗೆ ಗಮನ ಕೊಡು ಎಂದಿತು.
ನೀತಿ:ವಿನಾಕಾರಣ ತೊಂದರೆ ಕೊಡುತ್ತಿರುವವರನ್ನು ಕಡೆಗಣಿಸಿ ಬಾಳಿನಲ್ಲಿ ಮುನ್ನುಗ್ಗಬೇಕು.

No comments:

Post a Comment