Friday, February 11, 2011

ಮೊದಲು ಮಾನವರಾಗೋಣ

                                   ಮೊದಲು ಮಾನವರಾಗೋಣ
 ಬಾಬು ರಾಜೇಂದ್ರ ಪ್ರಸಾದ್ ಅವರು ಭಾರತದ ಪ್ರಥಮ ರಾಷ್ಟ್ರಪತಿ.ಭಾರತಕ್ಕೆ  ಸ್ವಾತಂತ್ರ್ಯ ಬಂದಾಗ ಭಾರತವನ್ನು ಜಾತ್ಯತೀತ ರಾಷ್ಟ್ರವಾಗಿ ಘೋಶಿಸಬೇಕೆಂಬುದು ಭಾರತದ ಪ್ರಥಮ ಪ್ರಧಾನಿ ನೆಹರು ಅವರ ಆಸೆಯಾಗಿತ್ತು.ಹೀಗಿರುವಾಗಲೇ ಭಾರತ ಸರಕಾರ ಮುಸ್ಲಿಂ ರಾಜರ ಧಾಳಿಯಿಂದ ಹಾನಿಗೊಳಗಾಗಿದ್ದ ಸೋಮನಾಥ ದೇವಾಲಯವನ್ನು ಜೀರ್ಣೋದ್ಧಾರ ಮಾಡಲು ನಿರ್ಧರಿಸಿತು.ಅಂತೆಯೇ ದೇವಾಲಯದ ಕೆಲಸವೂ ಆರಂಭವಾಯಿತು.
ಕೆಲಸ ಪೂರ್ತಿಯಾದ ಮೇಲೆ ನವೀಕೃತ ದೇವಸ್ಥಾನದ ಉದ್ಘಾಟನೆಗೆ ರಾಜೇಂದ್ರ ಪ್ರಸಾದ್ ಅವರನ್ನು ಕರೆಯಲಾಯಿತು.ಅವರು ಒಪ್ಪಿಕೊಂಡರು.ಆದರೆ ಇದಕ್ಕೆ ಪ್ರಧಾನಿ ನೆಹರು ಅವರು ಅಪಸ್ವರ ಎತ್ತಿದರು.ಅವರ ಪ್ರಕಾರ ಭಾರತ ಒಂದು ಜಾತ್ಯತೀತ ದೇಶ.ಹೀಗಾಗಿ ಒಂದು ಧರ್ಮದ ಕಟ್ಟಡದ ಉದ್ಘಾಟನೆಗೆ ಭಾರತದ ರಾಷ್ಟ್ರಪತಿಗಳು ಹೋಗುವುದು ತರವಲ್ಲ ಎಂಬುದಾಗಿತ್ತು.ಅದನ್ನು ಅವರು ಹೇಳಿದರು ಕೂಡ.
ಆದರೆ ರಾಜೇಂದ್ರ ಪ್ರಸಾದ್ ಅವರು ಇದಕ್ಕೆ ಒಪ್ಪಲಿಲ್ಲ.ಅವರು ತಾನು ಓರ್ವ ಭಕ್ತನಾಗಿ ಮತ್ತು ಮಾನವನಾಗಿ ಕಟ್ಟಡದ ಉದ್ಘಾಟನೆಗೆ ಹೋಗುವುದೇ ಹೊರತು ಭಾರತದ ರಾಷ್ಟ್ರಪತಿಯಾಗಿ ಅಲ್ಲ ಎಂದು ಬಿಟ್ಟರು.ಅಂತೆಯೇ ಅವರು ನಡೆದುಕೊಂಡರು ಕೂಡ.ಅವರು ತಾವು ಹೋಗುವ ಮೊದಲೇ ಸೋಮನಾಥ ದೇವಾಲಯದ ಅಧಿಕಾರಿಗಳಿಗೆ ಹೇಳಿದ್ದರು "ನಾನು ರಾಷ್ಟ್ರಪತಿಯಾಗಿ ಕಾರ್ಯಕ್ರಮಕ್ಕೆ ಬರುತ್ತಿಲ್ಲ.ಓರ್ವ ಸಾಮಾನ್ಯ ಭಕ್ತನಂತೆ ನಾನು ಬರುತ್ತಿದ್ದೇನೆ.ನನ್ನಿಂದಾಗಿ ದೇವರ ಯಾವ ಸೇವೆಯೂ ನಿಧಾನವಾಗದೆ ಅದರ ಸಮಯಕ್ಕೆ ತಕ್ಕಂತೆ ನಡೆಯಲಿ" ಎಂದು ಸೂಚಿಸಿದ್ದರು.
ನೀತಿ:ಮೊದಲು ನಾವು ಎಲ್ಲರೂ ಮಾನವರು.ನಂತರ ನಮ್ಮನ್ನು ಧರ್ಮದ ಆಧಾರದ ಮೇಲೆ ಗುರುತಿಸಿಕೊಳ್ಳಬಹುದು.

No comments:

Post a Comment