Sunday, February 13, 2011

ಸರಮೆ ಎಂಬ ದೇವನಾಯಿ

                                                ಸರಮೆ ಎಂಬ ದೇವನಾಯಿ
ಸರಮೆ ಎಂಬುದು ದೇವತೆಗಳ ರಾಜ ಇಂದ್ರನ ಬಳಿಯಿದ್ದ ನಾಯಿ.ಸರಮೆಯೇ ಭೂಲೋಕದ ನಾಯಿಗಳಿಗೂ ಮೂಲ ಎಂದು ನಂಬಲಾಗಿದೆ.ಹೀಗಿರುವಾಗ ದೇವಲೋಕಕ್ಕೆ ದಾನವರಿಂದ ಅಪಾಯವಿರುವುದನ್ನು ಮನಗಂಡ ದೇವೇಂದ್ರ ಒಂದು ಯಾಗ ಮಾಡಲು ಸಂಕಲ್ಪಿಸಿದ.ಅದರಂತೆ ಯಾಗದಲ್ಲಿ ದಾನವಾಗಿ ನೀಡಲು ದನಗಳನ್ನು ಕಲೆಹಾಕಿದ.ಮತ್ತು ಅವುಗಳನ್ನು ನೋಡಿಕೊಳ್ಳಲು ಸರಮೆಯನ್ನು ನೇಮಿಸಿದ.
ಆದರೆ ಇದರ ಸುಳಿವು ಹತ್ತಿದ ದಾನವರು ಆ ದನಗಳನ್ನೇ ಅಪಹರಿಸಲು ಸಂಚು ಹೂಡಿದರು.ಆದರೆ ಸರಮೆಯು ಅವರಿಗೆ ಹಾಗೆ ಮಾಡಲು ಬಿಡಲಿಲ್ಲ.ಕೊನೆಗೆ ದಾನವರು ಸರಮೆಗೆ ತಾವು ಕದ್ದುದರಲ್ಲಿ ಅರ್ಧ ಪಾಲನ್ನು ಕೊಡುವುದಾಗಿ ಆಸೆ ತೋರಿಸಿದರು.ಇದನ್ನು ನಂಬಿದ ಸರಮೆ ದಾನವರಿಗೆ ಹಸುಗಳನ್ನು ಕೊಂಡೊಯ್ಯಲು ಬಿಟ್ಟಿತು.ದಾನವರು ಹೋಗುವ ಮೊದಲು ಸರಮೆಗೆ ಹಸುಗಳ ಸ್ವಲ್ಪ ಹಾಲನ್ನು ಕುಡಿಯಲು ಅನುವು ಮಾಡಿಕೊಟ್ಟರು.
ಇಂದ್ರ ಹಸುಗಳ ಕಳುವಿನ ಬಗ್ಗೆ ಸರಮೆಯನ್ನು ಕೇಳಿದಾಗ ಅದು ತನಗೆ ಏನೂ ಗೊತ್ತಿಲ್ಲವೆಂದು ವಾದಿಸಿತು.ಇದರಿಂದ ಸಿಟ್ಟಾದ ಇಂದ್ರ ಸರಮೆಯನ್ನು ಝಾಡಿಸಿ ಒದ್ದ.ಆ ಹೊಡೆತದ ಪರಿಣಾಮವಾಗಿ ಸರಮೆ ಕುಡಿದಿದ್ದ ಹಾಲು ಎಲ್ಲಾ ಹೊರಗೆ ಚೆಲ್ಲಿತು.ಆಗ ಸರಮೆಯ ಬಣ್ಣ ಬಯಲಾಯಿತು.
ನಂತರ ಸರಮೆ ದೇವೇಂದ್ರನಿಗೆ ನಡೆದ್ದಿದ್ದನ್ನು ತಿಳಿಸಿತು.ನಂತರ ಸರಮೆ ದೇವೇಂದ್ರ ಮತ್ತು ಇತರ ದೇವತೆಗಳನ್ನು ಹಸುಗಳು ಇದ್ದ ಜಾಗವನ್ನು ವಾಸನೆಯ ಮೂಲಕ ಕಂಡುಹಿಡಿದು ಹಸುಗಳನ್ನು ಪತ್ತೆ ಹಚ್ಚಿತು.ನಂತರ ದೇವತೆಗಳು ದಾನವರೊಡನೆ ಯುದ್ಧ ಮಾಡಿ ಹಸುಗಳನ್ನು ಹಿಂದಕ್ಕೆ ಪಡೆದುಕೊಂಡರು.

No comments:

Post a Comment