Saturday, February 19, 2011

ಕೆರೆಯ ನೀರನ್ನು ಕೆರೆಗೆ ಚೆಲ್ಲಿ.....

                                     ಕೆರೆಯ ನೀರನ್ನು ಕೆರೆಗೆ ಚೆಲ್ಲಿ.....
ವಲ್ಲಭಾಚಾರ್ಯರು ತಮ್ಮ ಕಾಲದ ಪ್ರಕಾಂಡ ವಿದ್ವಾಂಸರು.ಒಮ್ಮೆ ಅವರು ವಾದ ಕೂಟದಲ್ಲಿ ಎಲ್ಲಾ ಜಯವನ್ನು ಗಳಿಸುತ್ತಾ ಶ್ರೀಕೃಷ್ಣ ದೇವರಾಯನ ಆಸ್ಥಾನಕ್ಕೆ ಬಂದರು.ಆಗ ರಾಜನು ಒಂದು ವಾದ ಗೋಷ್ಠಿಯನ್ನು ಏರ್ಪಾಟು ಮಾಡಿದನು.ವಲ್ಲಭಾಚಾರ್ಯರು ಅದ್ವೈತ ಸಿದ್ಧಾಂತದಲ್ಲಿ ಪಂಡಿತರು.ಹೀಗಾಗಿ ರಾಜನು ಹಿಂದೂ ಧರ್ಮದ ೩ ಪಂಗಡಗಳಾದ ದ್ವೈತ,ಅದ್ವೈತ,ವಿಶಿಷ್ಟಾದ್ವೈತ ಇವುಗಳಲ್ಲಿ ಚರ್ಚೆಯನ್ನು ಏರ್ಪಡಿಸಿದನು.
ವಲ್ಲಭಾಚಾರ್ಯರು ತಮ್ಮ ಪಾಂಡಿತ್ಯದಿಂದ ಎಲ್ಲರನ್ನೂ ಸೋಲಿಸಿದರು.ಇದರಿಂದ ಪ್ರಭಾವಿತನಾದ ರಾಜನು ಅವರಿಗೆ ೧೦೦ ಮಣ ಬಂಗಾರದ ನಾಣ್ಯಗಳನ್ನು ಬಹುಮಾನವಾಗಿ ನೀಡಿದನು.
ಆದರೆ ವಲ್ಲಭಾಚಾರ್ಯರು ಅದರಲ್ಲಿ ಕೇವಲ ೭ ಬಂಗಾರದ ನಾಣ್ಯಗಳನ್ನು ತಮ್ಮ ಬಳಿ ಇಟ್ಟುಕೊಂಡು ಉಳಿದದ್ದನ್ನು ಅಲ್ಲಿದ್ದ ಬಡವರಿಗೆ ದಾನ ಮಾಡಿದರು.ತಾವು ತೆಗೆದುಕೊಂಡ ೭ ಬಂಗಾರದ ನಾಣ್ಯಗಳನ್ನು ಅವರು ಕರಗಿಸಿ ಅದರಿಂದ ಆಭರಣಗಳನ್ನು ತಯಾರಿಸಿ ಅವನ್ನು ತಿರುಪತಿ ವೆಂಕಟರಮಣ ನಿಗೆ ಅರ್ಪಿಸಿದರು.ಹೀಗೆ ಅವರು ನಿಜವಾದ ಅರ್ಥದಲ್ಲಿ ತಮಗೆ ಸಿಕ್ಕಂಥ ಹಣವನ್ನು ಕೆರೆಯ ನೀರನ್ನು ಕೆರೆಗೆ ಚೆಲ್ಲಿದಂತೆ ಒಳ್ಳೆಯ ಕೆಲಸಕ್ಕಾಗಿ ವಿನಿಯೋಗಿಸಿದರು.

No comments:

Post a Comment