Thursday, February 3, 2011

ಆತುರದ ತೀರ್ಮಾನ ಸಲ್ಲದು

                                  ಆತುರದ ತೀರ್ಮಾನ ಸಲ್ಲದು
ರಾಮಣ್ಣ ಮತ್ತು ಭೀಮಣ್ಣ ಸ್ನೇಹಿತರು.ಅವರೀರ್ವರಿಗೂ ಕಾಡಿಗೆ ಹೋಗಿ ಸೌದೆ ಒಟ್ಟು ಮಾಡುವುದೇ ಕೆಲಸ.ಅದನ್ನು ಊರಿಗೆ ತಂದು ಅವರು ಮಾರುತ್ತಿದ್ದರು.ಆದರೆ ರಾಮಣ್ಣನ ಸೌದೆ ಖರ್ಚಾದಷ್ಟು ವೇಗವಾಗಿ ಭೀಮಣ್ಣನ ಸೌದೆ ಖಾಲಿಯಾಗುತ್ತಿರಲಿಲ್ಲ.ಇದು ಭೀಮಣ್ಣನ ಅಊಯೆಗೆ ಕಾರಣವಾಯಿತು.
ಒಮ್ಮೆ ಮನೆಯಿಂದ ಸೌದೆ ಹೆಕ್ಕಲು ಹೊರಡುವಾಗ ಭೀಮಣ್ಣನಿಗೆ  ತನ್ನ  ಕೊಡಲಿ ಸಿಗಲಿಲ್ಲ.ಇದರಿಂದಾಗಿ ಆತನಿಗೆ ಕಾಡಿಗೆ ಹೋಗಲು ಸಾಧ್ಯವಾಗಲಿಲ್ಲ.ಆದರೆ ಆವತ್ತು ರಾಮಣ್ಣನಿಗೆ ಎಂದಿಗಿಂತ ಹೆಚ್ಚಾಗಿ ಸೌದೆ ಸಿಕ್ಕು ಆತ ಸಂತೋಷದಿಂದ ಮನೆಗೆ ಹಿಂತಿರುಗುತ್ತಿದ್ದ.ಇದನ್ನು ಕಂಡ ಭೀಮಣ್ಣನಿಗೆ ರಾಮಣ್ಣನೆ ತನ್ನ ಕೊಡಲಿ ಕಳವು ಮಾಡಿ ಎಂದಿಗಿಂತ ಹೆಚ್ಚಾಗಿ ಸೌದೆ ಒಟ್ಟು ಮಾಡಿ ಮಾರಲು ಯತ್ನಿಸಿರುವುದಾಗಿ ಅನಿಸಲು ಸುರುವಾಯಿತು.
ಅದು ಎಷ್ಟು ಅತಿರೇಕಕ್ಕೆ ಹೋಯಿತೆಂದರೆ ಆತನಿಗೆ ಊಟವೂ ರುಚಿಸಲಿಲ್ಲ ಮತ್ತು ಕಣ್ಣಿಗೆ ನಿದ್ದೆಯೂ ಹತ್ತಲಿಲ್ಲ.ಹೀಗಿರಲು ಆತ ಅಡುಗೆ ಮಾಡಲು ಪದಾರ್ಥಗಳನ್ನು ಹುಡುಕುತ್ತಿದ್ದಾಗ ಮೂಲೆಯಲ್ಲಿ ತನ್ನ ಕೊಡಲಿ ಬಿದ್ದಿರುವುದು ಅವನಿಗೆ ಕಾಣುತ್ತದೆ.ಆಗ ಆತನಿಗೆ ನಿಜದ ಅರಿವಾಗಿ ತಾನು ಆತುರದಲ್ಲಿ ರಾಮಣ್ಣನ ಮೇಲೆ ಸಂಶಯ  ಪಟ್ಟದ್ದು ತಪ್ಪು ಎಂದು ಪಶ್ಚಾತ್ತಾಪವಾಗುತ್ತದೆ.

No comments:

Post a Comment