Friday, December 3, 2010

ನರಕಾಸುರ ವಧೆ

                                                  ನರಕಾಸುರ ವಧೆ
ಒಮ್ಮೆ ಭೂದೇವಿ ಮತ್ತು ವಿಷ್ಣುವಿನ ಸಂಗಮದಿಂದ ಓರ್ವ ಅಸುರ ಜನ್ಮ ತಾಳುತ್ತಾನೆ.ಮತ್ತು ಆತ ನರಕಾಸುರ ಎಂಬ ಹೆಸರನ್ನು ಹೊಂದುತ್ತಾನೆ.ಅಸುರೀ ಪ್ರವೃತ್ತಿಯವನಾದ ಈತ ಒಮ್ಮೆ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ,ತನಗೆ ತನ್ನ ತಾಯಿಯಿಂದ ಮಾತ್ರವೇ ಮರಣ ಬರಬೇಕು,ಮತ್ತಾರಿಂದಲೂ ಅಲ್ಲ ಎಂಬ ವರವನ್ನು  ಪಡೆಯುತ್ತಾನೆ.
ಈ ವರದಿಂದ ದರ್ಪದಿಂದ ಕೂದಿದವನಾಗಿ ಆತ ಅಸುರೀ ರಾಜ್ಯದ ಅಧಿಪತಿಯಾಗುತ್ತಾನೆ.ಮತ್ತು ದೇವತೆಗಳ ಮೇಲೆ ಧಾಳಿ ಮಾಡುತ್ತಾನೆ.ಆತ ದೇವತೆಗಳ ತಾಯಿಯಾದ ಅದಿತಿ ಯ ಕಿವಿ ಓಲೆಗಳನ್ನೇ ಅಪಹರಿಸುತ್ತಾನೆ.ಇದರಿಂದ ದುಖಿತಳಾದ ಅದಿತಿ ತನ್ನ ಮಗನಾದ ಇಂದ್ರನ ಬಳಿ ನಡೆದದ್ದನ್ನು ತಿಳಿಸುತ್ತಾಳೆ.ಆದರೆ ಇಂದ್ರ ಈ ನರಕಾಸುರನ ಉಪಟಳದಿಂದ ಪಾರು ಮಾಡುವಂತೆ ವಿಷ್ಣುವಿನ ಬಳಿ ಮೊರೆ ಇಡುತ್ತಾನೆ.
ಆಗ ಕೃಷ್ಣನ ಅವತಾರ ಭೂಲೋಕದಲ್ಲಿ ಆಗುತ್ತಿರುತ್ತದೆ.ಹೀಗಿರುವಾಗ ಕೃಷ್ಣ ತನ್ನ ಪ್ರಿಯ ಮಡದಿಯಾದ ಸತ್ಯಭಾಮೆಯ ಜೊತೆ ಆಕಾಶದಲ್ಲಿ ವಿಹರಿಸುತ್ತಿರುತ್ತಾನೆ.ಸತ್ಯಭಾಮೆ ಸೂರ್ಯ ಮತ್ತು ಭೂಮಿಯ ಆಶೀರ್ವಾದ ದಿಂದ ಹುಟ್ಟಿದವಳು.ಗರುಡನ ಬೆನ್ನ ಮೇಲೇರಿ ಈರ್ವರೂ ವಿಹರಿಸುತ್ತಿದ್ದಾಗ ನರಕಾಸುರ ಅವರ ದಾರಿಗೆ ತಡೆ ಒಡ್ಡುತ್ತಾನೆ ಮತ್ತು ಕೃಷ್ಣ ನ ಜೊತೆ ಯುದ್ಧ ಮಾಡಲು ಆರಂಭಿಸುತ್ತಾನೆ.
ಕೃಷ್ಣ ಆತನ ಮೇಲೆ ಬಾಣಗಳ ಮಳೆಯನ್ನೇ ಸುರಿಸುತ್ತಾನೆ.ಆದರೆ ನರಕಾಸುರ ತಾನು ಪಡೆದ ವರದ ಪ್ರಭಾವದಿಂದ ಅದೆಲ್ಲವನ್ನು ನಿವಾರಿಸಿಕೊಂಡು ಸತ್ಯಭಾಮೆಯ ಮೇಲೆ ಆಕ್ರಮಣ ಮಾಡುತ್ತಾನೆ.
ಆಗ ಕೃಷ್ಣ ನರಕಾಸುರ ಪಡೆದ ವರವನ್ನು ನೆನಪಿಸಿಕೊಂಡು ಮತ್ತು ತನ್ನ ಪ್ರಿಯ ಪತ್ನಿಯಾದ ಸತ್ಯಭಾಮೆಯ ಮೇಲೆ ಆಕ್ರಮಣ ಆಗುತ್ತಿರುವುದನ್ನು ಕಂಡು ಸತ್ಯಭಾಮೆಗೆ ತನ್ನ ಸುದರ್ಶನ ಚಕ್ರವನ್ನು ನೀಡಿ ಅದನ್ನು ಅಸುರನ ಮೇಲೆ ಪ್ರಯೋಗಿಸುವಂತೆ ತಿಳಿಸುತ್ತಾನೆ.ಅಂತೆಯೇ ಮಾಡಿದ ಸತ್ಯಭಾಮೆ ಸುದರ್ಶನ ಚಕ್ರದಿಂದ ನರಕಾಸುರನ್ನು ಸಂಹರಿಸುತ್ತಾಳೆ.ಆಕೆಯೂ ಭೂದೇವಿಯ ಅಂಶದಿಂದ ಹುಟ್ಟಿದವಳೇ..ಹೀಗಾಗಿ ನರಕಾಸುರ ಪಡೆದಾ ವರದಂತೆ ಆತನ್ನು ಸಂಹರಿಸುತ್ತಾಳೆ.
ಆದಿವಸ ಲೋಕವು ಪೀದಕನಾದ ನರಕಾಸುರನಿಂದ ಮುಕ್ತಿ ಹೊಂದಿತು.ಹೀಗಾಗಿ ಆ ದಿವಸವನ್ನು "ನರಕ ಚತುರ್ದಶಿ"  ಎಂದು ವಿಶ್ವದೆಲ್ಲದೆ ಜನರು ಆಚರಿಸುತ್ತಾರೆ.

No comments:

Post a Comment