Friday, December 10, 2010

ಮುಚುಕುಂದನ ಕಥೆ

                                                ಮುಚುಕುಂದನ ಕಥೆ
ಬಹಳ ಹಿಂದೆ ಭೂಮಿಯನ್ನು ಮುಚುಕುಂದ ಎಂಬ ರಾಜನು ಆಳುತ್ತಿದ್ದ.ಆತ ಧರ್ಮ ಪರಿಪಾಲಕನಾಗಿದ್ದು ದೇವತೆಗಳ ಮಿತ್ರನಾಗಿದ್ದ.ಹೀಗಿರಲು ಒಂದು ದಿನ ರಾಕ್ಷಸರು ದೇವತೆಗಳ ಮೇಲೆ ಧಾಳಿ ಮಾಡಿದರು.ಆಗ ದೇವತೆಗಳು ಮುಚುಕುಂದನ ಸಹಾಯ ಯಾಚಿಸಿದರು.ಮುಚುಕುಂದ ಅವರಿಗೆ ಸಹಾಯ ಮಾಡಲು ಒಪ್ಪಿ ದೇವತೆಗಳ ಜೊತೆಗೆ ತೆರಳಿದ.
ಆ ಯುದ್ಧ ಸಹಸ್ರಾರು ವರುಷಗಳ ತನಕ ನಡೆಯಿತು.ಆಗ ಭೂಲೋಕದಲ್ಲಿ ದ್ವಾಪರ ಯುಗ ಪ್ರಾರಂಭವಾಗಿತ್ತು,ಮತ್ತು ಅದು ಶ್ರೀಕೃಷ್ಣ ಅವತಾರದ ಪುಣ್ಯಕಾಲ.ಯುದ್ಧದಲ್ಲಿ ಮುಚುಕುಂದ ತೀವ್ರವಾಗಿ ದಣಿದಿದ್ದ ಮತ್ತು ಯುದ್ಧದಲ್ಲಿ ದೇವತೆಗಳಿಗೆ ಜಯ ಉಂಟಾಯಿತು.ತಮಗಾಗಿ ತಮ್ಮ ಜೊತೆ ಬಂದ ಮುಚುಕುಂದನಿಗೆ ದೇವತೆಗಳು ವರವನ್ನು ನೀಡಲು ಮುಂದಾದರು.
ಆದರೆ ಮುಚುಕುಂದ ತೀವೃವಾಗಿ ದಣಿದ ಕಾರಣ ಆತ ವಿಶ್ರಾಂತಿ ಪಡೆಯಲು ಇಚ್ಚಿಸಿದ.ಇದಕ್ಕೆ ಸರಿ ಎಂದ ದೇವತೆಗಳು ಯಾರಾದರು ಮುಚುಕುಂದನ ವಿರಾಮಕ್ಕೆ ಭಂಗ ತಂದರೆ ಅವರು  ಅಲ್ಲೇ ಸುಟ್ಟು ಬೂದಿಯಾಗಲಿ ಎಂದು ಹರಸಿದರು.ಮುಚುಕುಂದ ಭೂಲೋಕಕ್ಕೆ ಮರಳಿದ ಮತ್ತು ಒಂದು ಗುಹೆಯಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ.
ಆಗ ಕಂಸನು ಬಾಲಕ ಶ್ರೀಕೃಷ್ಣನನ್ನು ಕೊಲ್ಲಲು ಕಾಲಯವನ ಎಂಬ ರಾಕ್ಷಸನ್ನು ಕಳುಹಿಸುತ್ತಾನೆ.ಕಾಲಯವನನಿಗೂ ಕೃಷ್ಣನಿಗೂ ಭಯಂಕರ ಯುದ್ಧವಾಗುತ್ತದೆ, ಆಗ ಯುದ್ಧದ ಅಂತ್ಯವನ್ನು ಅರಿಯದೆ ಶ್ರೀಕೃಷ್ಣನಿಗೆ ಮುಚುಕುಂದನ ನೆನಪಾಗುತ್ತದೆ.ಕೂಡಲೇ ಆತ ಕಾಲಯವನನಿಂದ ತಪ್ಪಿಸಿಕೊಂಗು ಮುಚುಕುಂದ ಇರುವ ಗುಹೆಗೆ ಹೋಗಿ ಅಲ್ಲಿ ಅದಗುತ್ತಬೆ.
ಕಾಲಯವನನೂ ಕೃಷ್ಣನ ಹಿಂದೆ ಓಡಿ ಬರುತ್ತಾನೆ ಮತ್ತು ಅಲ್ಲಿ ಮಲಗಿದ್ದ ಮುಚುಕುಂದನನ್ನೇ ಕೃಷ್ಣ ಎಂದು ಭಾವಿಸಿ ಅವನಿಗೆ ಹೊಡೆಯುತ್ತಾನೆ.ಇದರಿಂದ ಎಚ್ಚರಗೊಂಡ ಮುಚುಕುಂದ ಕಣ್ಣು ಬಿಡಲು ಅಲ್ಲೇ ನಿಂತಿದ್ದ ಕಾಲಯವನ ಕಣ್ಣಿಗೆ ಬೀಳುತ್ತಾನೆ ಮತ್ತು ಕಾಲಯವನ ಮುಚುಕುಂದನ ವರ ಪ್ರಭಾವದಿಂದ ಅಲ್ಲೇ ಸತ್ತು ಕೆಳಗೆ ಬೀಳುತ್ತಾನೆ.ಹೀಗೆ ಕಾಲಯವನ ರಾಕ್ಷಸನ ಅಂತ್ಯವಾಗುತ್ತದೆ.
ಆಗ ಕೃಷ್ಣ ಅಡಗಿದ್ದ ಜಾಗದಿಂದ ಹೊರಬಂದು ತನ್ನ ಭಕ್ತನಾದ ಮುಚುಕುಂದನಿಗೆ ಮೋಕ್ಷವನ್ನು ಕರುಣಿಸುತ್ತಾನೆ.

1 comment: