Wednesday, December 1, 2010

ಪಾರಿಜಾತದ ಕಥೆ

                                                                           ಪಾರಿಜಾತದ ಕಥೆ
ಪಾರಿಜಾತ ಹೂವು ಸುಗಂಧ ಭರಿತವಾದದ್ದು.ಆದರೆ ಮೊದಲು ಆ ಹೂವು ಭೂಮಿ ಮೇಲೆ ಇರಲಿಲ್ಲ.ಅದು ಕೇವಲ ಸ್ವರ್ಗದಲ್ಲಿ ಇಂದ್ರನ ತೋಟದಲ್ಲಿ ಮಾತ್ರ ಬೆಳೆಯುತ್ತಿತ್ತು.
ಒಮ್ಮೆ ಶ್ರೀಕೃಷ್ಣ ತನ್ನ ಮಡದಿಯಾದ ಸತ್ಯಭಾಮೆ ಯ ಜೊತೆ ಆಕಾಶ ಮಾರ್ಗದಲ್ಲಿ ವಿಹರಿಸುತಿದ್ದಾಗ ಸತ್ಯಭಾಮೆಗೆ ಇಂದ್ರನ ತೋಟದಲ್ಲಿ ಬೆಳೆದ ಪಾರಿಜಾತ ಹೂವಿನ ಪರಿಮಳ ಬರುತ್ತದೆ.ಇದಕ್ಕೆ ಮನಸೋತ ಭಾಮೆ ಅದೇನೆಂದು ಕೃಷ್ಣ ನ ಬಳಿ ಕೇಳಿದಳು. ಆಗ ಕೃಷ್ಣನು ಅದು ಪಾರಿಜಾತ ಹೂವೆಂದೂ,ಇಂದ್ರನ ತೋಟದಲ್ಲಿ ಬೆಳೆದಿದೆ ಎಂದೂ ತಿಳಿಸಿದ.ಆಗ ಭಾಮೆ ಆ ಗಿಡವನ್ನು ತಮ್ಮ ತೋಟದಲ್ಲೂ ಬೆಳೆಸುವ ಇಚ್ಛೆ ವ್ಯಕ್ತಪಡಿಸಿದಳು.
ಕೃಷ್ಣ ತನ್ನ ಮೋಹದ ಮಡದಿಯ ಆಶೆಗೆ ಇಲ್ಲವೆನ್ನಲಾಗದೆ ಇಂದ್ರನ ಬಳಿ ಆ ಬಗ್ಗೆ ಕೇಳಿದಾಗ ಇಂದ್ರ ಅದು ತನ್ನ ತೋಟದಲ್ಲಿ ಮಾತ್ರ ಇರುವುದೆಂದೂ,ತಾನು ಗಿಡ ಕೊದುವುದಿಲ್ಲವೆಂದೂ ದರ್ಪದಿಂದ ನಿರಾಕರಿಸಿದ.ಆಗ ಸಿಟ್ಟಿಗೆದ್ದ ಕೃಷ್ಣ ಇಂದ್ರನ ಜೊತೆ ಯುದ್ಧ ಮಾಡಿ ,ಆತನನ್ನು ಸೋಲಿಸಿ ,ಪಾರಿಜಾತದ ಗಿಡವನ್ನು ತನ್ನೊಂದಿಗೆ ಭೂಮಿಗೆ ತರುತ್ತಾನೆ.
ಈ ಪಾರಿಜಾತ ಹೂವು ರಾತ್ರಿ ಸಮಯದಲ್ಲಿ ಅರಳಿ, ಸೂರ್ಯೋದಯ ಆಗುತ್ತಿದಂತೆ ಉದುರಿ ಕೆಳಗೆ ಬೀಳುತ್ತದೆ.ಆ ಉದುರಿದ ಹೂವನ್ನು ಬೆಳಗ್ಗೆ ತೋಟಕ್ಕೆ ಹೋದ ಬಾಲಿಕೆಯರು ತೆಗೆದುಕೊಂಡು ಬಂದು ಸುವಾಸನ ಭರಿತವಾದ ಮಾಲೆಯನ್ನು ಕಟ್ಟುತ್ತಾರೆ.ಮತ್ತು ಈ ಹೂವು ಕೃಷ್ಣನಿಗೆ ತುಂಬಾ ಪ್ರಿಯವಾದದ್ದು.
      

No comments:

Post a Comment