Tuesday, December 7, 2010

ಮನುಷ್ಯನ ಆಸೆಗೆ ಮಿತಿಯೇ ಇಲ್ಲ

                                                            ಯಯಾತಿಯ ಕಥೆ
ಬಹಳ ಹಿಂದೆ ಯಯಾತಿ ಎನ್ನುವ ಒಬ್ಬ ರಾಜ ಭೂಮಿಯನ್ನು ಆಳುತಿದ್ದ.ಆತನಿಗೆ ೧೦೦ ಜನ ಹೆಂಡತಿಯರು ಮತ್ತು ೧೦೦ ಜನ ಮಕ್ಕಳು.ಆತ ಚೆನ್ನಾಗಿ ರಾಜ್ಯಭಾರವನ್ನೂ ಮಾಡುತಿದ್ದ.ಹೀಗಿರಲು ಒಂದು ದಿನ ಮೃತ್ಯು ಅವನ ಮುಂದೆ ಬಂದು ನಿಂತಿತು.ನಿನ್ನ ಆಯುಷ್ಯ ಮುಗಿಯಿತು.ನಡೆ ಹೋಗೋಣ ಎಂದಿತು.
ಆದರೆ ಯಯಾತಿಗೆ ಸಾಯಲು ಮನಸ್ಸಿರಲಿಲ್ಲ.ಆತ ಮೃತ್ಯುವಿನ ಬಳಿ ತನಗೆ ಇನ್ನೂ ಬದುಕಲು ಆಸೆ ಇರುವುದಾಗಿ ,ತನ್ನನ್ನು ಸಾಯಿಸದಂತೆ ಬೇಡಿಕೊಂಡ.ಇದಕ್ಕೆ ಒಪ್ಪಿದ ಮೃತ್ಯು ನಿನ್ನ ಬದಲಿಗೆ ಬೇರೆ ಯಾರಾದರು ತಮ್ಮ ಜೀವನವನ್ನು ತ್ಯಾಗ ಮಾಡುವುದಾದರೆ ಆದೀತು ಎಂದಿತು.ಆಗ ಯಯಾತಿಯು ತನ್ನ ಮಕ್ಕಳನ್ನು ಕರೆದು ವಿಷಯ ತಿಳಿಸಿದಾಗ ಆತನ ಮೊದಲನೇ ಮಗ ತನ್ನ ಜೀವನವನ್ನು ತಂದೆಗಾಗಿ ನೀಡಲು ಒಪ್ಪಿಕೊಂಡ.ಯಯಾತಿ ಬದುಕುಳಿದ.
ಹೀಗೆ ಪ್ರತಿ ಸಲ ಯಯಾತಿಯ ಆಯುಷ್ಯ ಮುಗಿದಾಗ ಮೃತ್ಯು ಬರುವುದೂ ಮತ್ತು ಆತನ ಮಕ್ಕಳು ತಮ್ಮ ಜೀವನವನ್ನೇ ತಂದೆಗಾಗಿ ನೀಡುವುದು ನಡೆಯಿತು.ಹೀಗೆ ಆತನ ೯೯ ಮಕ್ಕಳು ತಮ್ಮ ಜೀವನವನ್ನು ತಂದೆಗೆ ಧಾರೆ ಎರೆದರು.ಯಯಾತಿ ಸುಮಾರು ವರುಷಗಳ ತನಕ ಬದುಕಿದ.ಈಗ ಆತನ ಕೊನೆ ಮಗನ ಸರದಿ.ಆತನಿಗಿನ್ನು ೧೪ ವರುಷ.ಆದರು ಆತ ತಂದೆಗಾಗಿ ಸಾಯಲು ಮುಂದೆ ಬಂದ.
ಆದರೆ ಮೃತ್ಯುವಿಗೆ ಆತನನ್ನು ಕೊಲ್ಲಲು ಮನಸ್ಸ್ಸಾಗಲಿಲ್ಲ.
ಮೃತ್ಯು ಹೇಳಿತು ನೀನಿನ್ನೂ ಚಿಕ್ಕ ಹುಡುಗ.ಮುಂದೆ ಬಾಳಿ ಬದುಕಬೇಕಾದವನು.ನಿನ್ನನ್ನು ಹೇಗೆ ಸಾಯಿಸಲಿ? ಎಂದು ಪ್ರಶ್ನಿಸಿತು.ಆಗ ಹುಡುಗ ನನ್ನ ದೇಹಕ್ಕೆ ಮಾತ್ರ ವಯಸ್ಸಾಗದೆ ಇರಬಹುದು,ಆದರೆ ನನ್ನ ಆತ್ಮಕ್ಕೆ ವಯಸ್ಸಾಗಿದೆ.ಈ ಶರೀರ ನನಗೆ ಬೇಕಾಗಿಲ್ಲ.ನಾನು ಪರಮಾತ್ಮನ ಬಳಿ ಹೋಗಲು ಇಚ್ಚಿಸುತ್ತೇನೆ ಎಂದ!
ಇದನ್ನು ನೋಡುತ್ತಿದ್ದ ಯಯಾತಿಗೆ ತನ್ನ ಮೇಲೆಯೇ ನಾಚಿಕೆ ಉಂಟಾಯಿತು.ಮನುಷ್ಯನ ಆಸೆಗೆ ಮಿತಿಯೇ ಇಲ್ಲ ಎನ್ನುವುದರ ಅರಿವಾಯಿತು.ಮತ್ತು ಆತನು ಸಾಯಲು ಸಿದ್ಧನಾದ
ನೀತಿ:  ಮನುಷ್ಯನ ಆಸೆಗೆ ಮಿತಿಯೇ ಇಲ್ಲ..

1 comment: