Sunday, December 12, 2010

ಅಹಿರಾವಣ ವಧೆ

                                           ಅಹಿರಾವಣ ವಧೆ
ರಾಮಾಯಣ ಕಾಲದಲ್ಲಿ ಅಹಿರಾವಣ ಎಂಬ ರಾಕ್ಷಸನು ರಾವಣ ನ ತಮ್ಮನಾಗಿದ್ದ  ಮತ್ತು ಆತ ಪಾತಾಳ ಲೋಕದ ಅಧಿಪತಿಯಾಗಿದ್ದ.ರಾಮ - ಲಕ್ಷ್ಮಣ ರು ಯುದ್ಧದಲ್ಲಿ ರಾವಣನ ಮಗನಾದ ಇಂದ್ರಜಿತ್ ನನ್ನು ಕೊಲ್ಲುತ್ತಾರೆ.ಇದು ರಾವಣನಿಗೆ ಗೊತ್ತಾಗಿ ಆತ ರಾಮ-ಲಕ್ಷ್ಮಣ ರನ್ನು ಕೊಲ್ಲಲು ಅಹಿರಾವಣನ ಸಹಾಯ ಯಾಚಿಸುತ್ತಾನೆ.ಇದು ರಾಮ ಭಕ್ತನಾದ ವಿಭೀಷಣ ನಿಗೆ ಹೇಗೋ ಗೊತ್ತಾಗಿ ಆತ ರಾಮನಿಗೆ ವಿಷಯ ತಿಳಿಸುತ್ತಾನೆ.
ಆಗ ರಾಮ ತನ್ನನ್ನು ಮತ್ತು ಲಕ್ಷ್ಮಣ ಮಲಗಿದ್ದಾಗ ಕಾಯಲು ಹನುಮಂತ ನನ್ನು ನೇಮಿಸುತ್ತಾನೆ.ಹನುಮಂತ ಅಹಿರಾವಣನು ಕೋಣೆ ಒಳಗೆ ಪ್ರವೇಶಿಸಲು ಬಿಡುವುದಿಲ್ಲ.ಇದರಿಂದ ಹತಾಶನಾದ ಅಹಿರಾವಣ ವಿಭೀಷಣ ನ ಹಾಗೆ ವೇಷ ಬದಲಿಸಿಕೊಂಡು ಬರುತ್ತಾನೆ ಮತ್ತು ಕೋಣೆ ಒಳಗೆ ಪ್ರವೇಶಿಸಿ ರಾಮ-ಲಕ್ಷ್ಮಣ ರನ್ನು ಪಾತಾಳ ಲೋಕಕ್ಕೆ ಅಪಹರಿಉತ್ತಾನೆ.
ಇದರಿಂದ ಕ್ರೋಧನಾದ ಹನುಮಂತ ಪಾತಾಳ ಲೋಕಕ್ಕೆ ಪ್ರವೇಶಿಸುತ್ತಾನೆ.ಆಗ ಅಲ್ಲಿ ದ್ವಾರಪಾಲಕನಾಗಿ ಒಂದು ಮಂಗ ಕುಳಿತಿರುತ್ತದೆ.ಅಚ್ಚರಿಗೊಂಡ ಹನುಮಂತ ಅದಾರೆಂದು ಕೇಳಲು ತಾನು ಹನುಮಂತನ ಮಗ ಎಂದು ಹೇಳುತ್ತದೆ.ಹನುಮಂತನಾದರೋ ಬ್ರಹ್ಮಚಾರಿ.ಆತನಿಗೆ ಕಳವಳವಾಗುತ್ತದೆ.
ಆಗ ಮಂಗ ಹನುಮಂತ ಲಂಕೆಗೆ ಹೋಗಲು ಸಮುದ್ರೋಲ್ಲಂಘನ ಮಾಡುತ್ತಿದ್ದಾಗ ಆತನ ಬೆವರ ಹನಿಯಿಂದ ತಾನು ಹುಟ್ಟಿದ್ದು ಎಂದು ತಿಳಿಸುತ್ತದೆ.ಸಾಕ್ಷಾತ್ ಹನುಮಂತ ನನ್ನೇ ಕಂಡು ಆತನನ್ನು ಒಳಗೆ ಬಿಡಲು ಒಪ್ಪುತ್ತದೆ ಮತ್ತು ಅಹಿರಾವಣ ನ ಪ್ರಾಣವು ೫ ದಿಕ್ಕುಗಲ್ಲಿ ದುಂಬಿ ರೂಪದಲ್ಲಿ ಇರಿಸಲ್ಪಟ್ಟಿದೆ ಎಂದೂ ,ದುಂಬಿಗಳನ್ನು  ಕೊಂದರೆ  ಅಹಿರಾವಣನನ್ನು ಸಂಹರಿಸ ಬಹುದೆಂದು ಉಪಾಯ ಹೇಳುತ್ತದೆ.
ಆಗ ಹನುಮಂತ ಪಂಚಮುಖಿ ಹನುಮಂತ ನಾಗಿ ಬದಲಾಗುತ್ತಾನೆ ಮತ್ತು ಆ ದುಂಬಿಗಳನ್ನು ಕೊಂದು ಅಹಿರಾವಣ ನನ್ನೂ  ಕೊಲ್ಲುತ್ತಾನೆ.
ಮತ್ತು ರಾಮ-ಲಕ್ಷ್ಮಣರನ್ನು ಮತ್ತೆ ಲಂಕೆಗೆ ಕರೆತರುತ್ತಾನೆ.

No comments:

Post a Comment