Monday, December 20, 2010

ಉಪಮನ್ಯುವಿನ ವಿಧೇಯತೆ

                                              ಉಪಮನ್ಯುವಿನ ವಿಧೇಯತೆ
ಉಪಮನ್ಯು ಎಂಬ ಬಾಲಕ ಆಚಾರ್ಯ ಧೌಮ್ಯ ರ ಆಶ್ರಮದಲ್ಲಿ ಕಲಿಯುತ್ತಿದ್ದನು.ಆಚಾರ್ಯ ಧೌಮ್ಯರಿಗೆ ಉಪಮನ್ಯು ಎಂದರೆ ವಿಶೇಷ ಪ್ರೀತಿ.ಗುರುಗಳಿಗೆ ಉಪಮನ್ಯುವಿನ ವ್ಯಾಸಂಗ ಪೂರ್ತಿಯಾಗಿದೆ ಎನಿಸಲು ಅವರು ಉಪಮನ್ಯುವನ್ನು ಕರೆದು ಇನ್ನು ಮುಂದೆ ಅವನು ದನಗಳನ್ನು ಮೇಯಿಸಲು ಕಾಡಿಗೆ ಹೋಗತಕ್ಕದ್ದು ಎಂದು ಅಪ್ಪಣೆ ಕೊಡಿಸಿದರು.
ಉಪಮನ್ಯು ಅದಕ್ಕೆ ಎದುರಾಡದೆ ದಿನಾ ದನಗಳನ್ನು ಮೇಯಿಸಲು ಕಾಡಿಗೆ ಹೋಗುತ್ತಿದ್ದ.ಆದರೆ ಹಿಂದುರುಗಿದಾಗ ಗುರುಗಳು ಉಣ್ಣಲು ಏನೂ ಕೊಡುತ್ತಿರಲಿಲ್ಲ.ಆದರೂ ಉಪಮನ್ಯು ಏನೂ ಹೇಳಲಿಲ್ಲ.ಆದರೆ ಆತನು ಆರೋಗ್ಯವಂತ ನಾಗೆ ಇದ್ದ.ಆಗ ಗುರುಗಳು ಅವನ ಬಳಿ ಕಾರಣ ಕೇಳಿದಾಗ ಉಪಮನ್ಯು ತಾನು ಭಿಕ್ಷಾಟನೆ ಮಾಡಿ ಉಣ್ಣುತ್ತಿರುವುದಾಗಿ ತಿಳಿಸಿದ.ಆಗ ಗುರುಗಳು ಗುರುವಿಗೆ ನೀಡದೆ ಉಣ್ಣುವುದು ತಪ್ಪು ಎಂದರು.
ಅದಕ್ಕೂ ಸರಿ ಎಂದ ಉಪಮನ್ಯು ಭಿಕ್ಷಾಟನೆಯ ಆಹಾರವನ್ನು ಗುರುಗಳಿಗೇ ನೀಡುತ್ತಿದ್ದ.ಆದರೆ ಉಪಮನ್ಯು ಆರೋಗ್ಯ ವಂತನಾಗೆ ಇದ್ದ.ಇದಕ್ಕೂ ಗುರುಗಳು ಕಾರಣ ಕೇಳಿದಾಗ ತಾನು ೨ನೆ ಸಲ ಭಿಕ್ಷೆಗೆ ಹೋಗುತ್ತಿರುವುದಾಗಿ ತಿಳಿಸಿದ.ಅದಕ್ಕೆ ಗುರುಗಳು ೨ ಸಲ ಭಿಕ್ಷಾಟನೆಗೆ ಆಕ್ಷೇಪ ಎತ್ತಿದರು.ಉಪಮನ್ಯು ಅದನ್ನೂ ನಿಲ್ಲಿಸಿದ.ಅದರೂ ಆತ ಅರೋಗ್ಯ ವಂತನಾಗೆ ಇದ್ದ.ಅದಕ್ಕೂ ಗುರುಗಳು ಕಾರಣ ಕೇಳಿದಾಗ ಉಪಮನ್ಯು ತಾನು ದನಗಳ ಹಾಲು ಕರೆದು ಕುಡಿಯುತ್ತಿರುವುದಾಗಿ ತಿಳಿಸಿದ.
ಅದಕ್ಕೂ  ಗುರುಗಳು ಆಕ್ಷೇಪ ಎತ್ತಿದರು.ಕೊನೆಗೆ ಉಪಮನ್ಯು ಅದನ್ನೂ ನಿಲ್ಲಿಸಿದ.ಆದರೆ ಹಸಿವು ತಾಳಲಾರದೆ ಆತ ಎಕ್ಕದ ಎಲೆಗಳನ್ನು ತಿನ್ನುತ್ತಾನೆ.ಇದರಿಂದ ಆತ ಕಣ್ಣು ಕಳೆದುಕೊಳ್ಳುತ್ತಾನೆ.ಆದರೂ ಆತ ತಡಬಡಾಯಿಸಿಕೊಂಡು ಆಶ್ರಮಕ್ಕೆ ಬರುತ್ತಾನೆ.ಆದರೆ ಕಣ್ಣು ಕಾಣದ ಕಾರಣ ಹಾಳು ಬಾವಿಗೆ ಬೀಳುತ್ತಾನೆ.ಎಷ್ಟು ಹೊತ್ತಾದರೂ ಉಪಮನ್ಯು ಬಾರದೆ ಇರುವುದನ್ನು ಗಮನಿಸಿದ ಗುರುಗಳು ಆತನನ್ನು ಹುದುಕಲಾರಂಭಿಸುತ್ತಾರೆ.ಆಗ ಉಪಮನ್ಯು ಕಣ್ಣು ಕಾಣದೆ ಬಾವಿಗೆ ಬಿದ್ದಿರುವುದು ತಿಳಿಯುತ್ತದೆ.
ಗುರುಗಳು ಉಪಮನ್ಯುವನ್ನು ಮೇಲಕ್ಕೆತ್ತಿ ಕಾರಣ ಕೇಳಿದಾಗ ಆತ ಸತ್ಯವನ್ನೇ ನುಡಿಯುತ್ತಾನೆ.ಇದರಿಂದ ತೃಪ್ತಿಗೊಂಡ ಗುರುಗಳು ಆತನಿಗೆ ಕಣ್ಣು ಬರುವಂತೆ ಅನುಗ್ರಹಿಸಿದರು.ಮತ್ತು ಉಪಮನ್ಯುವಿಗೆ ತಮ್ಮ ಎಲ್ಲ ವಿದ್ಯೆಯನ್ನು ಧಾರೆ ಎರೆದು ತಮ್ಮ ಉತ್ತರಾಧಿಕಾರಿಯಾಗಿ ಮಾಡಿದರು.
ನೀತಿ:ವಿದ್ಯೆಗೆ ವಿನಯವೇ ಭೂಷಣ.

No comments:

Post a Comment