Wednesday, December 15, 2010

ತ್ರಿಪುರಾಂತಕ

                                     ತ್ರಿಪುರಾಂತಕ
ಬಹಳ ಹಿಂದೆ ರಾಕ್ಷಸನಾದ ತಾರಕ ನಿಗೆ ೩ ತಮ್ಮಂದಿರು ಇದ್ದರು.ಈ ೩ ಜನ ಸೇರಿ ಬ್ರಹ್ಮ ನನ್ನು ಕುರಿತು ತಪಸ್ಸು ಮಾಡಿದರು.ಇದರಿಂದ ಸುಪ್ರೀತನಾದ ಬ್ರಹ್ಮ ಅವರಿಗೆ ಅಂತರಿಕ್ಷದಲ್ಲೇ ತೇಲಾಡುವ ೩ ನಗರ ಗಳನ್ನೂ ವರವಾಗಿ ನಿರ್ಮಿಸಿ ಕೊಡುತ್ತಾನೆ.ಮತ್ತು ಯಾರು ಈ ೩ ನಗರಗಳನ್ನು ಕೇವಲ ಒಂದೇ ಬಾಣದಿಂದ ಒಂದು ಮಾಡಿ ಅದನ್ನು ಸುಟ್ಟು ಬೂದಿ ಮಾಡುತ್ತಾರೋ,ಅವರಿಂದ ಆ ೩ ರಾಕ್ಷಸರಿಗೆ ಮರಣ ಎಂದು ವರವನ್ನಿತ್ತ.
ಈ ವರ ಪ್ರಭಾವದಿಂದ ಮದೋನ್ಮತ್ತರಾದ ಆ ೩ ರಾಕ್ಷಸರು (ತ್ರಿಪುರಾಸುರ) ರು ಸ್ವರ್ಗದ ಮೇಲೆ ಆಕ್ರಮಣ ಮಾಡಿ ಅಲ್ಲಿಂದ ದೇವತೆಗಳನ್ನು ಒದ್ದು ಓಡಿಸುತ್ತಾರೆ.ಇದರಿಂದ ನೊಂದ ದೇವತೆಗಳು ಪರಶಿವ ನ  ಬಳಿ ಬಂದು ಸಹಾಯ ಮಾಡಲು ಕೇಳಿ ಕೊಳ್ಳುತ್ತಾರೆ.ಆಗ ಶಿವನು ಆ ರಾಕ್ಷಸರು ಪಡೆದ ವರದ ಮಾಹಿತಿಯನ್ನು ಪಡೆಯುತ್ತಾನೆ.
ನಂತರ ಎಲ್ಲ ದೇವತೆಗಳ ಶಕ್ತಿಯಿಂದ ಕೂಡಿದ ಒಂದು ಬಾಣವನ್ನು ತಯಾರಿಸುತ್ತಾನೆ.ಆ ಬಾಣವು ಅತ್ಯಂತ ಪ್ರಭಾವ ಉಳ್ಳದ್ದು ಆಗಿರುತ್ತದೆ.ಆ ಬಾಣದಿಂದ ಶಿವನು ರಾಕ್ಷಸರ ೩ ನಗರಗಳನ್ನು ಒಟ್ಟು ಮಾಡಿ,ಅದಕ್ಕೆ ಬೆಂಕಿ ಹಚ್ಚುತ್ತಾನೆ.ಹೀಗೆ ತ್ರಿಪುರಗಳನ್ನು  ನಾಶ ಮಾಡಿದ ನಂತರ ಆ ರಾಕ್ಷಸರನ್ನೂ ಕೊಲ್ಲುತ್ತಾನೆ.ಇದರಿಂದ ಶಿವನಿಗೆ ತ್ರಿಪುರಾಂತಕ  ಎಂಬ ಹೆಸರು ಬಂದಿದೆ.

No comments:

Post a Comment