Wednesday, December 22, 2010

ದಂಡಕಾರಣ್ಯದ ಹುಟ್ಟು

                                 ದಂಡಕಾರಣ್ಯದ ಹುಟ್ಟು
ಹಿಂದೆ ಅಸುರೀ ರಾಜನಿಗೆ ದಂಡ ಎಂಬ ಮಗನಿದ್ದ.ಆದರೆ ಆತ ತುಂಬಾ ತಂಟೆ ಕೋರನಾಗಿದ್ದ.ಇದರಿಂದ ಬೇಸತ್ತ ಅಸುರೀ ರಾಜ ತನ್ನ ಮಗನನ್ನು ಒಂದು ಕಾಡಿನಲ್ಲಿ ತಂದು ಬಿಟ್ಟ.ದಂಡ ಕಾಡಿನಲ್ಲೇ ಅಲೆಯುತ್ತಿದ್ದ.ಆಗ ಅವನಿಗೆ ಅಸುರರ ಗುರು ಶುಕ್ರಾಚಾರ್ಯರ ಪರಿಚಯವಾಯಿತು.ದಂಡನು ಅಸುರ ರಾಜಕುಮಾರ ಎಂಬುದನ್ನು ಅರಿತ ಶುಕ್ರಾಚಾರ್ಯರು ಅವನನ್ನು ತಮ್ಮ ಶಿಷ್ಯನಾಗಿ ಸ್ವೀಕರಿಸಿದರು.ಮತ್ತು ತಮ್ಮ ಆಶ್ರಮದಲ್ಲೇ ಇರಲು ಅನುವು ಮಾಡಿಕೊಟ್ಟರು.
ಆದರೆ ದಂಡ ತನ್ನ ತಂಟೆ ಮಾಡುವ ಗುಣವನ್ನು ಮಾತ್ರ ಬಿಡಲಿಲ್ಲ.ಹೀಗಿರಲು ಒಂದು ದಿನಾ ಶುಕ್ರಾಚಾರ್ಯರು ಯಾವುದೋ ಕೆಲಸದ ನಿಮಿತ್ತ ಹೊರಹೋಗಿದ್ದರು.ಆ ಸಮಯದಲ್ಲಿ ದಂಡ ಗುರುಪುತ್ರಿಗೆ ಕೀಟಲೆ ಮಾಡಲು ಆರಂಭಿಸಿದ.ಒಂದು ಹಂತದಲ್ಲಿ ಆತ ಗುರುಪುತ್ರಿಯ ಮೇಲೆ ಬಲಪ್ರಯೋಗವನ್ನೂ ಮಾಡಿದ.ಇದರಿಂದ ನೊಂದ ಗುರುಪುತ್ರಿ ಅಳುತ್ತಾ ಒಂದು ಮೂಲೆಯಲ್ಲಿ ಕುಳಿತುಕೊಂಡಳು.
ಶುಕ್ರಾಚಾರ್ಯರು ಹಿಂತಿರುಗಿದ ಮೇಲೆ ಗುರುಪುತ್ರಿಯ ಬಾಯಿಂದ ನಡೆದದ್ದನ್ನು ಕೇಳಿ ಕೋಪಗೊಂಡರು.ಅವರು ದಂಡನಿಗೆ ಆತ ಪಟ್ಟಕ್ಕೆ ಬಂದ ಮೇಲೆ ಆತನ ರಾಜ್ಯದಲ್ಲಿ ಧೂಳಿನ ಮಳೆ ಸುರಿದು ಕಟ್ಟಡಗಳು ನಿರ್ನಾಮವಾಗಿ ಆ ಜಾಗದಲ್ಲಿ ಕಾಡುಗಳು ಬೆಳೆಯಲಿ ಎಂದು ಶಾಪವಿತ್ತರು.ಅಂತೆಯೇ ಆಯಿತು.ಹಾಗೆ ಕಾಡುಗಳು ಬೆಳೆದ ಜಾಗವನ್ನು ಇಂದು ದಂಡಕಾರಣ್ಯ ಎಂದು ಗುರುತಿಸುತ್ತಾರೆ.

No comments:

Post a Comment